Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: ಸಿರಿಯಮ್ಮಗೆ ಜಾನಪದ ಅಖಾಡಮಿ ರಾಜ್ಯ ಪ್ರಶಸ್ತಿ | state award
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > ಸಿರಿಯಮ್ಮಗೆ ಜಾನಪದ ಅಖಾಡಮಿ ರಾಜ್ಯ ಪ್ರಶಸ್ತಿ | state award
ಇಂದಿನ ಸುದ್ದಿ

ಸಿರಿಯಮ್ಮಗೆ ಜಾನಪದ ಅಖಾಡಮಿ ರಾಜ್ಯ ಪ್ರಶಸ್ತಿ | state award

Editor Nammajana
Last updated: 5 November 2024 02:53
By Editor Nammajana 2 Min Read
Share
SHARE

Chitradurga news |nammajana.com|4-11-2024

ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಎಲಗಟ್ಟೆ ಗೊಲ್ಲರ ಹಟ್ಟಿಯ ಚಿಕ್ಕಣ್ಣ ನವರ ಪತ್ನಿ ಸಿರಿಯಮ್ಮ (೮೦ ವರ್ಷ)ನವರು ಅನಕ್ಷರಸ್ತೆಯಾಗಿದ್ದರೂ (state award) ಸಾವಿರಾರು ಪದಗಳ ಒಡತಿಯಾಗಿದ್ದಾರೆ.

ಕಾಡುಗೊಲ್ಲರು ತಲತಲಾಂತರವಾಗಿ ಒಂದು ಪರಂಪರೆಯ ಚೌಕಟ್ಟಿನಲ್ಲಿ ಹಾಡಿಕೊಂಡು ಬಂದಿರುವ ಪದ ಸಾಹಿತ್ಯವನ್ನು ಸೋಬಾನೆ ಪದಗಳು, ಕೋಲು ಪದಗಳು, ಗಗ್ಗರ ಪದಗಳು, ಈರುಗಾರರ ಕಥನಗಳು, ಗಣೆ ಕಾವ್ಯಗಳು ಹಾಗೂ (state award) ಮಹಾಕಾವ್ಯಗಳೆಂದು ಸ್ಕೂಲವಾಗಿ ವರ್ಗೀಕಲಿಸಬಹುದು.

ಸಿರಿಯಮ್ಮ ಕುರಿ ಸಾಕಣೆ ಹಾಗೂ ಕೃಷಿ ಚಟುವಟಿಕೆಯ ನಡುವೆಯೂ ಕಾಡುಗೊಲ್ಲ ಬುಡಕಟ್ಟಿನ ಸಾಂಸ್ಕೃತಿಕ ನಾಯಕರಾದ ಎತ್ತಪ್ಪ ಜುಂಜಪ್ಪ ಕ್ಯಾತಪ್ಪ ಮಹಾಕಾವ್ಯಗಳನ್ನೂ ‘ಸಿರಿಯಣ್ಣ ‘ ಎಂಬ ಕಥನ ಕಾವ್ಯವನ್ನು ಹಾಗೂ ಸೋಬಾನೆ ಪದಗಳನ್ನು ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದಾರೆ. ತನ್ನ ಅಜ್ಜಿ ಹಾಗು ತಾಯಿಯಿಂದ ಪದಗಳನ್ನು ಕಲಿತು ಚಿಕ್ಕ ಪ್ರಾಯದಲ್ಲೇ ಹಾಡಲು ಆರಂಭಿಸಿದ ಸಿರಿಯಮ್ಮ ಜಾನಪದ ಸರಸ್ವತಿ, ಜಾನಪದ ಕಣಜ ಎಂದೇ ನಾಡಿನಾದ್ಯಂತ ಖ್ಯಾತಿ (state award) ಪಡೆದಿದ್ದ ನಾಡೋಜ ಸಿರಿಯಜ್ಜಿಯ ಸಾಹಚರ್ಯದಿಂದ ಮತ್ತಷ್ಟು ಪದಗಳನ್ನು ತನ್ನ ಮನೋಭಿತ್ತಿಯಲ್ಲಿ ತುಂಬಿಸಿಕೊಳ್ಳುತ್ತಾಳೆ .

ಹೆಸರಾಂತ ಸಾಹಿತಿಗಳಾದ ಡಾ ಎ ಕೆ ರಾಮಾನುಜಂ, ಡಾ ಎನ್ ಎಲ್ ಭೈರಪ್ಪ, ಡಾ ಹೆಚ್ ಎಲ್ ನಾಗೇಗೌಡ, ಡಾ ಕೃಷ್ಣಮೂರ್ತಿ ಹನೂರು ಮುಂತಾದ ಪ್ರಸಿದ್ಧ ಸಾಹಿತಿಗಳು ಸಿರಿಯಜ್ಜಿಯನ್ನು ಬೇಟಿಮಾಡಲು ಬಂದ ಸಂದರ್ಭಗಳನ್ನು ಸಿರಿಯಜ್ಜಿಯ ಸಹವರ್ತಿಯಾಗಿದ್ದ ಸಿರಿಯಮ್ಮ ತುಂಬ ಮನೋಜ್ಞವಾಗಿ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತಾರೆ.

ಇಂತಹ ಸಂದರ್ಭಗಳು ಬಹುತೇಕ ಕಲಾವಿದರಿಗೆ ಲಭ್ಯವಾಗುವುದಿಲ್ಲ ಲಭ್ಯವಾದರೂ ಆ ಸನ್ನಿವೇಶಗಳ ಸ್ವಾರಸ್ಯವನ್ನು ಮಹತ್ವ ವನ್ನು ಗಂಭೀರ ವಾಗಿ (sಸನ್ನಿವೇಶಗಳ) ಪರಿಗಣಿಸುವುದಿಲ್ಲ. ಹೀಗಿರುವಾಗ ಸಿರಿಯಮ್ಮ ಮಾತ್ರ ಇವರೆಲ್ಲರಿಗಿಂತ ಭಿನ್ನ ತಾನು ಕಂಡುಂಡಂತಹ ಗಣ್ಯ ಸಂಶೋಧಕ, ಸಾಹಿತಿಗಳ ಸನಿಹದಲ್ಲಿ

ತನಗುಂಟಾದ ಸ್ವಾರಸ್ಯಕರ ಅನುಭವಗಳನ್ನು ತನ್ನ ಬಂದು ಬಳಗ ಹಾಗೂ ಆಸಕ್ತ ಜನರಿಗೆ ಚಾಚೂ ತಪ್ಪದೆ ಹಂಚಿಕೊಳ್ಳುತ್ತಾರೆ.

ಭಾಷೆ ಮತ್ತು ಸಂಸ್ಕೃತಿಯ ಹಿನ್ನಲೆಯಲ್ಲಿ ಸಿರಿಯಮ್ಮನವರ ಪದಗಳಲ್ಲಿ ಚಿತ್ರದುರ್ಗ ಸೀಮೆಯ ಭಾಷಿಕ ಅನನ್ಯತೆಯನ್ನು ಪರಿಭಾವಿಸ ಬಹುದಾಗಿದೆ.

ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ, ಯಾರಿಗೆ ಶುಭ, ಅಶುಭ?

ನಾಡೋಜ ಸಿರಿಯಜ್ಜಿಯ ನಂತರ ಇಂದಿನ ಯುವತಿಯರಿಗೆ ಪದಗಳನ್ನು ಕಲಿಸಿಕೊಡುವ ಮೂಲಕ ತನ್ನ ನಂತರದ (stಬಹುದಾಗಿದೆ) ಮುಂದಿನ ಪೀಳಿಗೆಗೆ ಪದಗಳನ್ನು ಹೊತ್ತೊಯ್ಯುವ ಪ್ರಯತ್ನ ಮಾಡುತ್ತಿದ್ದಾರೆ ಇವರ ಸಾಧನೆಯನ್ನು ಗುರುತಿಸಿ ಬೆಂಗಳೂರಿನ ನಾಡೋಜ ಸಿರಿಯಜ್ಜಿ ಸಾಂಸ್ಕೃತಿಕ ಪ್ರತಿಷ್ಠಾನವು ೨೦೨೧ ರಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಸಿರಿಬೆಳಗು’ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಕರ್ನಾಟಕ ಜಾನಪದ ಅಕಾಡೆಮಿ 2023-24 ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ನೀಡಿದೆ.

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?

TAGGED:Chitradurga NewsFolk AcademyGovernment of KarnatakaKannada Newskannada suddiNammajana.comSiriammaState Awardಕನ್ನಡ ನ್ಯೂಸ್ಕನ್ನಡ ಸುದ್ದಿಕರ್ನಾಟಕ ಸರ್ಕಾರಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಜಾನಪದ ಅಖಾಡಮಿನಮ್ಮಜನ.ಕಾಂರಾಜ್ಯ ಪ್ರಶಸ್ತಿಸಿರಿಯಮ್ಮ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya: ಇಂದಿನ ರಾಶಿ ಭವಿಷ್ಯ, ಯಾರಿಗೆ ಶುಭ, ಅಶುಭ?
Next Article Dina Bhavishya kannada: ಇಂದಿನ ರಾಶಿ ಭವಿಷ್ಯ, ಪ್ರೇಮಿಗಳಿಗೆ ಅನುಕೂಲ, ಯುವಕರಿಗೆ ಹೊಸ ಅವಕಾಶ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ
ಇಂದಿನ ಸುದ್ದಿ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ
ಇಂದಿನ ಸುದ್ದಿ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?