
Chitradurga news|nammajana.com|2-12-2024
ನಮ್ಮಜನ.ಕಾಂ, ಚಿತ್ರದುರ್ಗ: ಪಟ್ಟಣದ ಸೇರಿದಂತೆ ತಾಲೂಕಿನ ಪ್ರಮುಖ ಗ್ರಾಮಗಳಲ್ಲಿ ಬೀದಿ ನಾಯಿಗಳ ಉಪಟಳಬೇರೆ ತಡೆಗೆ (Stray dog attack) ಹೆಚ್ಚಾಗಿದ್ದು, ಸಾರ್ವಜನಿಕರು ಹಾಗೂ ಮಕ್ಕಳು ಭಯದ ವಾತವರಣದಲ್ಲಿ ಓಡಾಡುವಂತಾಗಿದೆ.
ಪಟ್ಟಣದ ಗೌಸಿಯನಗರದಲ್ಲಿ ಶನಿವಾರ ರಾತ್ರಿ ಬೀದಿಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾ ಏಕಿ ಹತ್ತಾರು ಬೀದಿ ನಾಯಿಗಳು ದಾಳಿ ನಡೆಸಿದ್ದು, ಸುಮಾರು 6 ಮಕ್ಕಳು ಗಾಯಗೊಂಡಿದ್ದಾರೆ.

ನಾಯಿ ಕಡಿತದಿಂದಮಕ್ಕಳುಚೀರಾಟಕಂಡಸಾರ್ವಜನಿಕರು ನಾಯಿಗಳನ್ನು ಒಡೆದು ಓಡಿಸಿದ್ದಾರೆ.ಗಾಯಗೊಂಡ ಮಕ್ಕಳನ್ನು ಆರಾಮ್ (4), ವೃಷಾದ್ (2)ಮೋಹನ್ (15)ರಪೀರ್ಾಬ್ (16) ಮಹಮದ್ (7) ಕೀರ್ತಿರಾಜ್ (12) ಎಂದು (Stray dog attack) ಗುರುತಿಸಲಾಗಿದೆ.
2 ವರ್ಷದ ಬಾಲಕ ವೃಷಾದ್ಗೆ ಮುಖ, ಇತರೆ ಭಾಗಗಳಲ್ಲಿ ಕಚ್ಚಿದ್ದು ಹೋಲಿಗೆಹಾಕಲಾಗಿದೆ. ಉಳಿದ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಮಕ್ಕಳಿಗೆ ಹೊಸದುರ್ಗಸಾರ್ವಜನಿಕ ಆಸ್ಪತ್ರೆ ಗೆದಾಖಲಿಸಿಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಮುಖದ ಗಾಯಕ್ಕೆ ಒಳಗಾಗಿದ್ದ ಬಾಲಕ ವೃಷಾದ್ನನ್ನು ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಬೀದಿ ನಾಯಿ ಕಡಿತದಿಂದ ತೀವ್ರವಾಗಿ
ಗಾಯಗೊಂಡಿರುವ ಬಾಲಕ ವೃಷಾದ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವುದು.
ಈ ವರ್ಷದ ಇಲ್ಲಿಯತನಕ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ 700ಕ್ಕೂ ಅಧಿಕ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ನಾಯಿ ಕಡಿತ ಪ್ರಕರಣಗಳು ಕಂಡು ಬಂದರೂ ಪುರಸಭೆ, ಸ್ಥಳೀಯ ಗ್ರಾಪಂಗಳು ಬೀದಿ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನಾಗಲೀ ಹಿಡಿದುನಿರ್ಜನ ಪ್ರದೇಶಕ್ಕೆ ಬಿಡುವ ಕೆಲಸವನ್ನಾಗಲೀ ಮಾಡಿಲ್ಲ. ಸುಪ್ರೀಂ ಕೋರ್ಟ್ನಿಂದ ಬೀದಿ ನಾಯಿ ಕೊಲ್ಲಬಾರದು ಎಂಬ ಆದೇಶ ಬಂದ ನಂತರ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಪರ್ಯಾಯ (Stray dog attack) ಕ್ರಮಗಳನ್ನೂ ಕೈಗೊಳ್ಳದಿರುವುದು ದುರಂತ.
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ | ಯಾವ್ಯಾವ ಊರಲ್ಲಿ ಕರೆಂಟ್ ಇಲ್ಲ | Today Power Cut
ಶಾಸಕರ ಸೂಚನೆಗೂ ಕಿಮ್ಮತ್ತಿಲ್ಲ:
ಕಳೆದ ಎರಡು ತಿಂಗಳ ಹಿಂದೆ ನಡೆದ ಕೆಡಿಪಿ ಸಭೆಯಲ್ಲಿ ನಾಯಿ ಕಡಿತ ಪ್ರಕರಗಳ ವಿಚಾರ ಚರ್ಚೆ ಮುನ್ನೆಲೆಗೆ ಬಂದಿತ್ತು. ಈ ಬಗ್ಗೆ ಶಾಸಕ ಬಿ.ಜಿ.ಗೋವಿಂದಪ್ಪ ಅವರು ಬೀದಿ ನಾಯಿಗಳ ನಿಯಂತ್ರಣಕ್ಕೆ ಇಲಾಖೆ ಮಾರ್ಗದರ್ಶನ ಪಡೆದುಸೂಕ್ತ ಕ್ರಮವಹಿಸುವಂತೆ ಪುರಸಭೆ, ಗ್ರಾಪಂ, ಪಶು ಇಲಾಖೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದರೂ ಯಾವೊಬ್ಬ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಸಾರ್ವಜನಿಕರ ಆಕ್ರೋಶ: ಪಟ್ಟಣದಲ್ಲಿ ನಾಯಿ ಕಡಿತದ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದರೂ,ಸ್ಥಳೀಯ ಆಡಳಿತ ಹಾಗೂ ಪಶು ಇಲಾಖೆಯ ಅಧಿಕಾರಿಗಳುಮೌನವಾಗಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಸಾಯಿಸಿ ಇಲ್ಲ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕುಎಂದುಒತ್ತಾಯಿಸಿರುವ ಸಾರ್ವಜನಿಕರು ಈ ಕೆಲಸವನ್ನು ಸ್ಥಳೀಯ 1 ಆಡಳಿತ ಶೀಘ್ರವಾಗಿ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಕೋಳಿ ಕಸ ಸಮರ್ಪಕ ನಿರ್ವಹಣೆಗೆ ಒತ್ತಾಯ:
ಹೊಸದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ಶ್ರೀರಾಂಪುರ, ಬೆಲಗೂರುಗ್ರಾಮಗಳಲ್ಲಿಯೂಕೋಳಿ ವ್ಯಾಪಾರಿಗಳುಹಾಗೂಕೋಳಿಮಾಂಸವ್ಯಾಪಾರಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ತ್ಯಾಜ್ಯದಲ್ಲಿರುವ ಮಾಂಸದ ರುಚಿ ಕಂಡ ಬೀದಿ ನಾಯಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತಿವೆ.
ಈ ಬಗ್ಗೆ ಸಾಕಷ್ಟು ಬಾರಿ ಆಯಾ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪಟ್ಟಣದ ಪುರಸಭೆ ಅಧಿಕಾರಿ ಗಳಿಗೆ ತಿಳಿಸಿದರು ಯಾವುದೇ ಕ್ರಮ ಕೈಗೊಳ್ಳದೆ (Stray dog attack) ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಮುಂದೆ ಮಾರಣಾಂತಿಕವಾಗಿ ದಾಳಿಗಳಾದರೆ ಸಂಬಂ ಧಿಸಿದ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ.
ಬಾಕ್ಸ್
ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಸಾರ್ವಜನಿಕ ರಿಂದ ಬಂದ ದೂರಿನ ಅನ್ವಯ ಪಶು ಇಲಾಖೆಯ ಸಹಯೋಗದಲ್ಲಿ ಈಗಾಗಲೇ ಒಂದು ಬಾರಿ ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚುಮದ್ದು ನೀಡಿ ಬೇರೆಡೆಗೆ ಬಿಡಲಾಗಿದೆ. ಮತ್ತೆ ನಾಯಿಗಳು ಹೆಚ್ಚಾಗಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಹಿಡಿದು ಚುಚ್ಚು ಮದ್ದು ನೀಡಿ ಬೇರೆಡೆಗೆ ಬಿಡಲಾಗುವುದು
ಇದನ್ನೂ ಓದಿ: ದಿನ ಭವಿಷ್ಯ | 2 ಡಿಸೆಂಬರ್ 2024 | Today Dina Bhavishya
• ತಿಮ್ಮರಾಜು ಮುಖ್ಯಾಧಿಕಾರಿ
ಪುರಸಭೆ, ಹೊಸದುರ್ಗ
ಬಾಕ್ಸ್
ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದ್ದು, ಪಟ್ಟಣದಲ್ಲಿ ಬೀದಿ ನಾಯಿಗಳ ಉಪಟಳದ ಬಗ್ಗೆ ಪುರಸಭೆ ಸದಸ್ಯರು ಹಾಗೂ ಆಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದಿದ್ದೇನೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದೇನೆ. ಇಷ್ಟಾದರೂ ಇಲ್ಲಿಯವರೆಗೆ ಯಾರೋಬ್ಬರೂ ಇದಕ್ಕೆ ಪರಿಹಾರ ನೀಡುವಲ್ಲಿ ಮುಂದಾಗಿಲ್ಲ. ಈಗಲಾದರೂ ಇನ್ನು ಹೆಚ್ಚಿನ ಅನಾವುತಗಳು ಆಗುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು
• ಫಕ್ಸದ್ದಿನ್ ಪುರಸಭೆ ಮಾಜಿ ಸದಸ್ಯ, ಹೊಸದುರ್ಗ
ಇದನ್ನೂ ಓದಿ: ಇಂದು ವಿದ್ಯುತ್ ವ್ಯತ್ಯಯ | ಯಾವ್ಯಾವ ಊರಲ್ಲಿ ಕರೆಂಟ್ ಇಲ್ಲ | Today Power Cut