
Chitradurga news|nammajana.com|30-11-2024
ನಮ್ಮಜನ.ಕಾಂ, ಚಳ್ಳಕೆರೆ: ಬೇಡಿಕೆಯಾದ ಸಂಶೋಧನಾ ಕೇಂದ್ರ ಸ್ಥಾಪನೆಗೆ ಪ್ರಾಮಾಣಿಕ ಕ್ರಮವಹಿಸುವೆ. ಇದರ ಜತೆಗೆ ಕಡುಬನಕಟ್ಟೆಯಲ್ಲಿ ಐತಿಹಾಸಿಕ ಸಾರುವ ಮಾಹಿತಿಕೇಂದ್ರ (Symposium) ಸ್ಥಾಪನೆಗೆ ಎಲ್ಲಾ ಸಿದ್ದತೆ ನಡೆಸಲಾಗಿದೆ ಎಂದು ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ಹೇಳಿದರು.
ಅವರು, ನಗರದ ಹೆಚ್ ಪಿಪಿಸಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ನಾಯಕ ಅರಸರು ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮದಕರಿನಾಯಕ, ಭರಮಣ್ಣನಾಯಕ ಸೇರಿದಂತೆ ೧೪ ಜನ ಅರಸರು ಚಿತ್ರದುರ್ಗ ಕೋಟೆಯನ್ನು ಆಳಿದ್ದಾರೆ ಅವರ ಬಗ್ಗೆ (Symposium) ಸಂಪೂರ್ಣ ಅಧ್ಯಯ ನಡೆಯಬೇಕಿದೆ. ಈಗಾಗಲೇ ಹಲವಾರು ಸಂಶೋಧಕರು ನಾಯಕ ಅರಸರುಗಳ ಬಗ್ಗೆ ಗ್ರಂಥಗಳನ್ನು ರಚಿಸಿದ್ದಾರೆ ಅವರೊಟ್ಟಿಗೆ ಮತ್ತಷ್ಟು ಅಧ್ಯಯನ ಮಾಡುವ ಅಗತ್ಯತೆ ಇದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿವಿಯ ವಾಲ್ಮೀಕಿ ಅಧ್ಯಯನ ಪೀಠದ ಸಂಚಾಲಕ ಡಾ.ಅಮರೇಶಯತಗಲ್, ನಮ್ಮ ವಿಶ್ವವಿದ್ಯಾಲಯದಲ್ಲಿ ಕಳೆದ ೨೦೦೬ರಿಂದಲೇ ವಾಲ್ಮೀಕಿ ಅಧ್ಯಯನ ಪೀಠಪ್ರಾರಂಭಗೊಂಡು ಕರುನಾಡಿನ ಹಲವಾರು ಭಾಗಗಳಲ್ಲಿ ವಾಲ್ಮೀಕಿ ಕುರಿತು ನಡೆಯುವ ವಿಶೇಷ ಆಚರಣೆ, ಸಂಪ್ರದಾಯ, ಸಂಸ್ಕಾರ, ನುಡಿ ಹೀಗೆ ಹಲವಾರು ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.
ವಾಲ್ಮೀಕಿ ಮರುನಿರೂಪಣೆ ಎಂಬ ವಿಷಯದಲ್ಲಿ ರಾಷ್ಟ್ರೀಯ ವಿಚಾರಸಂಕಿರಣ ಮಾಡುವ ಮೂಲಕ ರಾಷ್ಟ್ರಮಟ್ಟದಲ್ಲೂ ವಾಲ್ಮೀಕಿ ಇತಿಹಾಸವನ್ನ ಸಾರಿದೆ. ನಾಯಕ ಸಂಸ್ಕೃತಿ (Symposium) ಮೆಲುಕುಹಾಕಲು ಇಂತಹ ವಿಚಾರ ಸಂಕಿರಣಗಳ ಅವಶ್ಯಕತೆ ಇದೆ, ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚು ಅಧ್ಯಾಯಶೀಲರಾಗಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ, ನಮ್ಮ ಪ್ರದೇಶದಲ್ಲಿ ಗತಿಸಿದ ಘಟನೆ ಬಗ್ಗೆ ನಾವೇ ಅತ್ಮಾಭಿಮಾನ ಬೆಳೆಸಿಕೊಂಡಾಗ ಅದರ ಘನತೆ ಹೆಚ್ಚುತ್ತದೆ. ನಮ್ಮಲ್ಲಿ ಹಲವಾರು ಪಾಳೆಗಾರರು, ರಾಜಮನೆತನಗಳು ನೂರಾರು ಆಚರಣೆ, ಸಂಸ್ಕೃತಿ, (Symposium) ಸಂಸ್ಕಾರವನ್ನು ನಮಗಾಗಿ ಬಿಟ್ಟುಹೋಗಿದ್ದಾರೆ ಅದರ ಬಗ್ಗೆ ನಾವು ತಿಳಿಯಬೇಕಿದೆ.
ನೂರಾರು ಅಧ್ಯಯನ ಅರಸರುಗಳ ಪರಿಶ್ರಮ, ದಕ್ಷತೆ, ಜನರಿಗೆ ನೀಡಿದ ಸೇವೆಯ ಬಗ್ಗೆ ಗುರುತಿಸಿದ್ದು ಪ್ರಾದೇಶಿಕ ಚರಿತ್ರೆ ಅಧ್ಯಯನಕ್ಕೆ ಪ್ರೇರಣೆಯಾಗಿದೆ. ಈಗಿನ ವಿದ್ಯಾರ್ಥಿಗಳು ಹೊಸ ವಿಷಯಗಳ ಬೆಳಕು ಹಾಯಿಸಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಜಾನಪದ ಮತ್ತು ರಂಗಭೂಮಿ ತಜ್ಞ ಪಿ.ತಿಪ್ಪೇಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಆಂಧ್ರಪ್ರದೇಶದ ಕೃಷ್ಣದೇವರಾಯ ವಿವಿಯ ಪ್ರಾದ್ಯಾಪಕ ಡಾ.ಎನ್.ಸದಾಶಿವರೆಡ್ಡಿ, ಪ್ರಾಚಾರ್ಯ ಪ್ರೊ.ಬಿ.ಎಸ್.ಮಂಜುನಾಥ, ಲಕ್ಷ್ಮಣ ತೆಲಗಾವಿ, ಸಿ.ಶಿವಲಿಂಗಪ್ಪ ಮಾತನಾಡಿದರು.
ಇದನ್ನೂ ಓದಿ: ಪಿಡಿಓ ವೆಂಕಟೇಶ್ ಅಮಾನತು | Suspended
ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಕವಿತಾ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ನಾಮಿನಿ ಸದಸ್ಯರಾದ ಅನ್ವರ್ಮಾಸ್ಟರ್, ಆರ್.ವೀರಭದ್ರಪ್ಪ, ಸುರೇಶ್, ಅತಿಥಿಗಳಾದ ಸದಾಶಿವಪ್ಪ, ಡಾ.ಚನ್ನಕೇಶವ, ತಿಪ್ಪಣ್ಣಮರಿಕುಂಟೆ, ಹರ್ತಿಕೋಟೆವೀರೇಂದ್ರಸಿಂಹ, ಮದಕರಿವಂಶಸ್ಥ ದೇವಿಪ್ರಸಾದ್, ಡಾ.ಎಂ.ಎಸ್.ಮುತ್ತಯ್ಯ, ರಾಜಶೇಖರಯ್ಯ, ಡಾ.ಜಿ.ವಿ.ರಾಜಣ್ಣ, ಡಾ.ಕೆ.ಚಿತ್ತಯ್ಯ, ಡಾ.ಡಿ.ಎನ್.ರಘನಾಥ ಮುಂತಾದವರು ಇದ್ದರು.
ಇದನ್ನೂ ಓದಿ: ಚಿತ್ರದುರ್ಗ | ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಮಾಲತೇಶ್ ಮುದ್ದಜ್ಜಿ ಆಯ್ಕೆ | Government Employees Union