
Chitradurga news|nammajana.com|20-10-2024
ನಮ್ಮಜನ.ಕಾಂ, ಚಳ್ಳಕೆರೆ: ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಿಂದ 2013, 2018 ಮತ್ತು 2023 ಮೂರು ಚುನಾವಣೆಗಳಲ್ಲಿ ಅತಿಹೆಚ್ಚಿನ ಮತಗಳ ಹಂತದಿಂದ ಜಯಭೇರಿ ಬಾರಿಸಿ ಹ್ಯಾಟ್ರಿಕ್ ವಿಜಯ ಸಾಧಿಸಿದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಮ್ಮನ್ನು ಮೂರು ಬಾರಿ ಆಯ್ಕೆ ಮಾಡಿದ ಕ್ಷೇತ್ರದ ಮತದಾರರ ವಿಶ್ವಾಸ, ಅಭಿಮಾನಕ್ಕೆ ಗೌರವ ನೀಡಿ ಮತದಾರರ ಋಣವನ್ನು (T. Raghumurthy) ತೀರಿಸುವ ನಿಟ್ಟಿನಲ್ಲಿ ತಮ್ಮ ಏಕಮಾತ್ರ ಪುತ್ರಿ ಟಿ.ಆರ್.ಸುಚಿತ್ರ, ಜಿ.ವರುಣರವರ ವಿವಾಹವನ್ನು ನಗರದ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಧಾಕರ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳುವ ಮೂಲಕ ಕ್ಷೇತ್ರದ ಮತದಾರರಿಗೆ ತಮ್ಮ ಅಭಿನಂದನಾ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ.
ಈಗಾಗಲೇ ಕಳೆದ ಸುಮಾರು ಒಂದುವಾರದಿಂದ ಕ್ರೀಡಾಂಗಣದಲ್ಲಿ ವೈಭವದ ಅದ್ದೂರಿ ವಿವಾಹಕ್ಕೆ ಸಿದ್ದತೆಗಳು ಭರದಿಂದ ಸಾಗಿದ್ದು, ವಿವಾಹದ ಕಲ್ಯಾಣಮಂಟಪದಲ್ಲೇ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ, ಈ ಕ್ಷೇತ್ರದ ಜನ ನನಗೆ ಮೂರು ಬಾರಿ ವಿಜಯಶಾಲಿಯಾಗುವ ಅವಕಾಶವನ್ನು ದೊರಕಿಸಿಕೊಟ್ಟಿದ್ದಾರೆ.

ಇದನ್ನೂ ಓದಿ: ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಕರೆಂಟ್ ಇರಲ್ಲ | ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ | POWER CUT
ಇದು ನನಗೆ ದೈವದ ಫಲವೆಂದು ಸ್ವೀಕರಿಸಿದ್ದೇನೆ. ಮತದಾರರ ವಿಶ್ವಾಸ, ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಮತದಾರರ ಎದುರೇ, ಸಮ್ಮುಖದಲ್ಲೇ ಅವರ ಆಶೀರ್ವಾದದಿಂದಲೇ ನನ್ನ ಪುತ್ರಿಯ ವಿವಾಹ ನಡೆಯಬೇಕೆಂಬ ಸಂಕಲ್ಪದಿಂದ ಇಲ್ಲಿಯೇ (T. Raghumurthy) ವಿವಾಹ ಕಾರ್ಯ ಮಾಡುತ್ತಿದ್ದೇನೆ. ಕ್ಷೇತ್ರದ ಜನರನ್ನು ಈಗಾಗಲೇ ಆಹ್ವಾನಿಸಿದ್ದೇನೆ, ಎಲ್ಲಾ ಸಿದ್ದತೆ ನಡೆದಿವೆ. ಎಲ್ಲರೂ ಆಗಮಿಸಿ ವದುವರರನ್ನು ಆಶೀರ್ವದಿಸಿ ನಾವು ನೀಡುವ ಅತಿಥಿ ಸತ್ಕಾರವನ್ನು ಸ್ವೀಕರಿಸುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆಂದು ತಿಳಿಸಿದ್ದಾರೆ.
ಶಾಸಕ ಪುತ್ರಿ ವಿವಾಹ ಹಿನ್ನೆಲೆಯಲ್ಲಿ ಚಳ್ಳಕೆರೆನಗರದ ಚಿತ್ರದುರ್ಗ ರಸ್ತೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ನಗರದ ಎಲ್ಲಾ ವೃತ್ತಗಳಲ್ಲಿ ಮುಖ್ಯಮಂತ್ರಿ ಎಸ್.ಸಿದ್ದರಾಮಯ್ಯ ಸೇರಿದಂತೆ ಆಗಮಿಸುವ ಎಲ್ಲರಿಗೂ ಸ್ವಾಗತಕೋರುವ ಬ್ಯಾನರ್ಗಳು ರಾರಾಜಿಸುತ್ತವೆ. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮುಖ್ಯಮಂತ್ರಿಗಳನ್ನು ಸ್ವಾಗತಿಸಲು (T. Raghumurthy) ತಮ್ಮದೇಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕ್ಷೇತ್ರದ ಜನರೂ ಸಹ ಶಾಸಕ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಇದ್ದಾರೆ.
ಇದನ್ನೂ ಓದಿ: ಶಾಸಕ ರಘುಮೂರ್ತಿ ಮಗಳ ಮದುವೆಗೆ ಸಿಂಗಾರಗೊಂಡ ಚಳ್ಳಕೆರೆ, ಜನರ ಕಣ್ಮನ ಸೆಳೆಯುತ್ತಿರುವ ಮದುವೆ ಮಂಟಪ | Daughter marriage
ವಿವಾಹ ಕಾರ್ಯಕ್ಕೆ ಆಗಮಿಸುವ ಲಕ್ಷಾಂತರ ಜನರಿಗೆ ಬೋಜನವೂ ಸೇರಿದಂತೆ ಯಾವುದೇ ಅವ್ಯವಸ್ಥೆಯಾಗದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಈಗಾಗಲೇ ಹಲವಾರು ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಕ್ಷೇತ್ರದ (T. Raghumurthy) ಪ್ರತಿ ಗ್ರಾಮಕ್ಕೂ ವಿವಾಹದ ಆಹ್ವಾನದ ಪತ್ರಿಕೆಗಳನ್ನು ಕಳಿಸಿ ಎಲ್ಲರನ್ನೂ ಆಹ್ವಾನಿಸಿದ್ದು ಲಕ್ಷಾಂತರ ಜನರು ಬರುವಿಕೆಗೆ ಮಂಟಪ ಸಿದ್ದವಾಗಿದೆ.