
Chitradurga news | nammajana.com | 17-5-2024
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ (Chitradurga) ವರುಣದೇವ (rain) ಕೃಪೆ ತೋರಿದ್ದು ಸಂಜೆ 6 ಗಂಟೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಬೆಂಕಿಯಲ್ಲಿ ಹಾಕಿದಂತೆ ಉರಿ ಬಿಸಿಲಿನ ಜೊತೆ ಮಳೆ ವಾತಾವರಣ ಇದ್ದರು ಸಹ ಮಳೆ ಮಾತ್ರ ಬರಲಿಲ್ಲ. ನಿನ್ನೆಯಿಂದಲೂ ಸಹ ಮಳೆ ಮುನ್ಸೂಚನೆ ನೀಡಿ ಇಂದು ಸಂಜೆಯಿಂದ ಮಳೆಯಾಗುತ್ತಿದ್ದು ವಾತವರಣ ಸ್ವಲ್ಪ ಕೂಲ ಆಗಿದೆ.
ನಗರದ ಜನರು ಇನ್ನೇನು ಮನೆ ಸೇರುವಷ್ಟರಲ್ಲಿ ಪ್ರಾರಂಭವಾದ ಮಳೆಯ ಪರಿಣಾಮವಾಗಿ ಗೂಡ ಅಂಗಡಿ, ಪುಟ್ ಬಾತ್ ಅಂಗಡಿ, ಹಲವು ಜಾಗಗಳಲ್ಲಿ ಜನರು ನಿಂತು ಮಳೆ ಬಿಡುವುದನ್ನು ಕಾಯುತ್ತಿರುವ ದೃಶ್ಯಗಳು, ಬೈಕ್ ಸವಾರರು ನೆನೆದುಕೊಂಡು ತೆರಳುತ್ತಿದ್ದರು, ಇನ್ನೂ ಕೆಲವರು ಆಟೋ ಕರೆದಿ ಮನೆಗೆ ತೆರಳಲು ಹರಸಾಹಸ ಪಡುವ ದೃಶ್ಯಗಳು ಕಂಡು ಬಂದವು.
ಗುಡುಗು ಸಿಡಿಲಿನ ಮೂಲಕ ಮಳೆರಾಯ ತನ್ನ ಅರ್ಭಟ ಮುಂದುವರೆಸಿದ್ದು ಭೂಮಿ ತಂಪಾಗುತ್ತಿದೆ.