Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Tungabhadra: ಭರಮಸಾಗರಕ್ಕೆ ಬಂದ ತುಂಗಭದ್ರೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Tungabhadra: ಭರಮಸಾಗರಕ್ಕೆ ಬಂದ ತುಂಗಭದ್ರೆ
ಇಂದಿನ ಸುದ್ದಿ

Tungabhadra: ಭರಮಸಾಗರಕ್ಕೆ ಬಂದ ತುಂಗಭದ್ರೆ

Nammajana Sub Editor
Last updated: 6 July 2025 5:30 AM
By Nammajana Sub Editor 3 Min Read
Share
SHARE

Chitradurga News|Nammajana.com |06-07-2025

ನಮ್ಮಜನ.ಕಾಂ, ಚಿತ್ರದುರ್ಗ: ಕೃಷಿಕರ ಬದುಕಿನಲ್ಲಿ ಹೊಂಗನಸು ಹಾಸಿಕೊಂಡವರಿಗೆ ಆಸರೆಯಾಗಿ ದೂರದ ಹರಿಹರ ಸಮೀಪದ ತುಂಗಭದ್ರೆ(Tungabhadra) ನದಿಯಿಂದ ಧುಮ್ಮಿಕ್ಕಿ ಬಂದ ನೀರಿನ ಖುಷಿಗೆ ರೈತ ಸಂತಸಗೊಂಡಿದ್ದಾನೆ.

ಇದನ್ನೂ ಓದಿ: ಆಡಳಿತ ನ್ಯಾಯಾಧೀಕರಣ ತರಬೇತಿ | ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ

ಯಾಕೋ ಈ ಬಾರಿಯ ಮುಂಗಾರು ಅಷ್ಟಾಗಿ ಸಂತಸತಾರದೇ ಇದ್ದರೂ, ಇದೀಗ ಭರಮಸಾಗರ ಕೆರೆಯನ್ನು ಕೇಂದ್ರವನ್ನಾಗಿಟ್ಟುಕೊಂಡು 42 ಕೆರೆಗಳನ್ನು ತುಂಬಿಸುವ ಮಹತ್ಕಾರ್ಯಕ್ಕೆ ಈ ಮುಂಗಾರುಸಂದರ್ಭದಲ್ಲಿ ಚಾಲನೆನೀಡಲಾಗಿದೆ. 56 5. ದಾಪುಗಾಲಿಟ್ಟು ಬರುತ್ತಿರುವ ತುಂಗಭದ್ರೆ ಭರಮಸಾಗರದ ಐತಿಹಾಸಿಕ ಭರಮಣ್ಣನಾಯಕನ ಕೆರೆಯ ಒಡಲು ತುಂಬುತ್ತಿರುವ ದೃಶ್ಯ ಕಣ್ಣನ ಸೆಳೆಯುವಂತಾಗಿದೆ.

ಗಾಜನೂರು ಸಮೀಪದ ತುಂಗೆ, ಲಕ್ಕವಳ್ಳಿಯ ಸಮೀಪದ ಭದ್ರೆಯ ಒಡಲಿನಿಂದ ಬರುವ ನೀರು ಮುಂದೆ ತುಂಗಭದ್ರೆ(Tungabhadra)ಯಾಗಿ ರೂಪುಗೊಂಡು ಮುಂದೆ ಹರಿಯುತ್ತಿದ್ದ ನೀರನ್ನು ಸಂಪದ್ಭರಿತವಾಗಿ ತಮ್ಮ ದೂರದೃಷ್ಟಿಯಿಂದ ಯೋಜನೆಯನ್ನು ರೂಪಿಸಿ ಅದು ಸಾಕಾರಗೊಳ್ಳುವಂತೆ ಮಾಡಿದವರು ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ. ಪರಿಣಾಮವಾಗಿ ಸಿದ್ಧವಾದ 565 ಕೋಟಿ ರು. ಯೋಜನೆಗೆ ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹಾಕಿ ಅದನ್ನು ಕಾರ್ಯಗತ ಮಾಡಿದ ಕೀರ್ತಿ ಶ್ರೀಗಳವರಿಗೆ ಸಲ್ಲುತ್ತದೆ.

ರೂಪಿಸಲು

ಭರಮಸಾಗರದ ಭರಮಣ್ಣ ನಾಯಕನ ಕೆರೆ 1000 ಎಕರೆ ವಿಸ್ತೀರ್ಣವಿದ್ದು, ಅಲ್ಲಿಗೆ ನೀರನ್ನು ತಂದು ಕೇಂದ್ರೀಕರಿಸಿ ಅಲ್ಲಿಂದ ಮುಂದೆ ವಿವಿಧ ಕವಲುಗಳಾಗಿ 4 ಮಾರ್ಗದಲ್ಲಿ ಹರಿದು 42 ಕೆರೆಗಳ ಒಡಲು ತುಂಬಿಸುತ್ತದೆ. ಇಂತಹ ಬೃಹದಾಕಾರದ ನೀರಾವರಿ ಯೋಜನೆಯನ್ನು ಕಾರ್ಯಗತಗೊಳಿಸಲು ಬಳಸಿಕೊಂಡ ಅವಧಿ ಕೇವಲ ! ವರ್ಷ ಎಂಬುದೊಂದು ವಿಸ್ಮಯದ ಸಂಗತಿಯೇ. 2023ರ ಸೆ.23 ರಂದು ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ದಾಂಜಲಿ ಸಂದರ್ಭಕ್ಕೆ ಸರಿಯಾಗಿ ಮೊದಲ ಬಾರಿಗೆ ನೀರು ಹರಿದು ಬಂದಾಗ ಆಕಾಶದೆತ್ತರಕ್ಕೆ ಕುಣಿದಾಡಿದ ಕೃಷಿಕರು ಈಗ ನೆಮ್ಮದಿಗೆ ಕೃಷಿಗೆ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಗರಸಭೆ | ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಈ ಹಂಗಾಮಿನಲ್ಲಿ ಹರಿಹರದ ನದಿ ತೀರದಲ್ಲಿನ ಎರಡುಮೋಟಾರ್‌ಗಳನ್ನುಚಾಲುಗೊಳಿಸಲಾಗಿದೆ. ಭರಮಸಾಗರದಿಂದ 42 ಕೆರೆಗಳಿಗೆ ಹರಿಯುವ ನೀರಿನ ಮಾರ್ಗಗಳನ್ನು ಸಂಪೂರ್ಣವಾಗಿ ಪರಿಶೀಲಿಸಲು ಅಗತ್ಯಕ್ಕೆ ತಕ್ಕ ಮೋಟಾರು ಚಾಲುಗೊಳಿಸಿ ಆ ಕಾರ್ಯ ಮುಗಿಸಲಾಗಿದೆ.

ಕರ್ನಾಟಕ ನೀರಾವರಿ ನಿಗಮದ ಸಹಾಯಕ ಅಭಿಯಂತಕ ಮನೋಜ್ ಕುಮಾರ್ ಏತ ನೀರಾವರಿ ಯೋಜನೆಯ ಎಲ್ಲಾ ಕೆರೆಗಳಿಗೆ ಭೇಡಿ ನೀಡಿ ನೀರು ಹರಿಯುವುದನ್ನು ಖಾತ್ರಿ ಮಾಡಿಕೊಂಡಿದ್ದಾರೆ.

ಖಾಲಿಯಾಗದ ಕೆರೆಗಳು:

ಕಳೆದ ವರ್ಷ ಸಂತೃಪ್ತವಾದ ಮಳೆ ಹಾಗೂ ಏತ ನೀರಾವರಿ ನೀರು ಸೇರಿ ಬಹುತೇಕ ಕೆರೆಗಳು ತುಂಬಿಕೋಡಿ ಹರಿದಿದ್ದವು. ಈಗಲೂ ಬಹುತೇಕ ಕೆರೆಗಳಿಗೆ ನೀರು ಆಶಾದಾಯಕವಾಗಿಯೇ ಸಂಗ್ರಹವಾಗಿದೆ. ಈ ಹಂಗಾಮಿಗೆ ಮೋಟಾರ್‌ಗಳನ್ನು ಚಾಲು ಮಾಡಿರುವುದರಿಂದ ಈಗಾಗಲೇ ಬಹುತೇಕ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಇದು ಕೃಷಿಕರ ಸಂತಸಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬೀದಿನಾಟಕ, ಜಾನಪದ ಸಂಗೀತ | ಕಲಾ ತಂಡಗಳಿಂದ ಅರ್ಜಿ ಆಹ್ವಾನ

ಈ ಬಾರಿ ಆದಷ್ಟು ಕಡಿಮೆ ಅವಧಿಯಲ್ಲಿಯೇ ಕೆರೆಗಳು ತುಂಬಿಹೋಗುವ ಭರವಸೆ ಕೃಷಿಕರಿಗೆ ಮೂಡಿದೆ.ಕೆರೆಗಳಲ್ಲಿ ನೀರುಸಂಗ್ರಹವಾಗುತ್ತಿದ್ದಂತೆ ಈ ಪ್ರದೇಶದಲ್ಲಿನ ಅಂತರಜಲ ಮಟ್ಟ ನಿರೀಕ್ಷೆ ಮೀರಿಸುಧಾರಿಸಿದೆ.ಬೇಸಿಗೆಯಲ್ಲಿ ಉಂಟಾಗುತ್ತಿದ್ದ ಕುಡಿಯುವ ನೀರಿನ ತೊಂದರೆಯಿಂದಲೂ ಜನರು ಬಚಾವ್ ಆಗಿದ್ದಾರೆ.

ಅಡಕೆ ವಿಸ್ತರಣೆ:

ಭರಮಸಾಗರ(bharamasagara) ಕೆರೆಗೆ ನೀರು ಬಂದಿದ್ದೇ ಭಾಗವನ್ನು ಕೇಂದ್ರವನ್ನಾಗಿಟ್ಟುಕೊಂಡು ಅಡಕೆ ಬೆಳೆಯುವ ಪ್ರದೇಶದ ವಿಸ್ತೀರ್ಣ ಗಮನಾರ್ಹವಾಗಿ ಏರಿಕೆ ಕಂಡಿದೆ. ಈ ಮುಂಗಾರಿನಲ್ಲಿ ಮೆಕ್ಕೆಜೋಳ ಬಿತ್ತನೆಯ ಪ್ರಮಾಣ ಕಡಿಮೆಯಾಗಿರುವುದು ಸಹ ವಿಶೇಷವಾಗಿದೆ. ಎಲ್ಲೆಂದರಲ್ಲಿ ಅಡಿಕೆಯ ಕೃಷಿ ಆಗಿದೆ. ಚಿಕ್ಕಪುಟ್ಟ ವಿಸ್ತೀರ್ಣದ ಜಮೀನುಗಳಲ್ಲಿ ಕೊಳವೆ ಬಾವಿ, ಮೋಟಾರು, ವಿದ್ಯುತ್ ಪರಿವರ್ತಕಗಳು ಸ್ಥಾನ ಗಿಟ್ಟಿಸಿಕೊಂಡಿವೆ. ಪರಿಣಾಮವಾಗಿ ಅಡಿಕೆ ಸಸಿ ಸಾಕಿದವರಿಗೂ ಈ ಬಾರಿ ಬಂಪರ್ ಹಣ ಸಿಕ್ಕಂತಾಗಿದೆ.

ಭರಮಸಾಗರ ಕೆರೆಗೆ ನೀರು ಬಂದ ಮೇಲೆ ಈ ಭಾಗದ ಮಲೆನಾಡಿನಂತೆ ಅಭಿವೃದ್ಧಿಯಾಗುತ್ತಿರುವುದು ನಮಗೆ ಸಂತೋಷ ತಂದಿದೆ. ಕೃಷಿಕರು ಪೈಪೋಟಿ ಬಿದ್ದವರಂತೆ ತೋಟದ ಬೆಳೆಗಳತ್ತ ಗಮನ ಕೊಟ್ಟು ತಮ್ಮ ಆರ್ಥಿಕ ಅಭಿವೃದ್ಧಿಗೆ ಮುಂದಾಗಿದ್ದಾರೆ.

ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ

ಇದನ್ನೂ ಓದಿ: Development work | ಚಿಕ್ಕಗೊಂಡನಹಳ್ಳಿಯಲ್ಲಿ ಮೂರು ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿಗೆ ಶಾಸಕ ಟಿ.ರಘುಮೂರ್ತಿ ಚಾಲನೆ

ಈ ಬಾರಿ 42 ಕೆರೆಗಳನ್ನು ತುಂಬಿಸಲು ಇಲಾಖೆಯು ಮುಂದಾಗಿದೆ. ಹರಿಹರ ನದಿ ನೀರದಲ್ಲಿ 2 ಮೋಟಾರು ಭರಮಸಾಗರ ಕೆರೆಯಲ್ಲಿ 2 ಮೋಟಾರ್‌ಗಳನ್ನು ಚಾಲುಗೊಳಿಸಲಾಗಿದೆ. ಯೋಜನೆಯ ಎಲ್ಲಾ ಕೆರೆಗಳಿಗೆ ನೀರು ತಲುಪುತ್ತಿದೆ. ತಾಂತ್ರಿಕ ದೋಷಗಳು ಇರುವ ಕಡೆ ಆದಷ್ಟು ಬೇಗನೆ ಪರಿಹರಿಸಲು ಮುಂದಾಗುತ್ತೇವೆ.

–ಮನೋಜ್ ಕುಮಾರ್ ಸಹಾಯಕ ಅಭಿಯಂತರು ಕರ್ನಾಟಕ ನೀರಾವರಿ ನಿಗಮ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

Today Gold Rate | ಚಿನ್ನದ ಬೆಲೆಯಲ್ಲಿ ಏರಿಕೆ

ಗೌರಿ – ಗಣೇಶ ಹಬ್ಬ, ಚಿತ್ರದುರ್ಗ ಜಿಲ್ಲಾಧಿಕಾರಿಯಿಂದ 13 ಪಾಯಿಂಟ್‌ನ ಪ್ರಮುಖ ಆದೇಶ, ಏನೇನದು? | Gauri Ganesha

Power cut : ಇಂದು ವಿದ್ಯುತ್‌ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?

Dina Bhavishya | ದಿನ ಭವಿಷ್ಯ | 21 ಆಗಸ್ಟ್ 2025 | ರಾಶಿಗಳ ಯೋಗ ಹೇಗಿದೆ

Chitradurga ವರ್ಷಿತಾ ಮರ್ಡರ್ | ಆರೋಪಿ ಚೇತನ್ ವರ್ಷಿತಾ ಕೊಲೆಗೆ ಕಾರಣ ಕೊಟ್ಟಿದ್ದೇನು? ಕೇಳಿದರೆ ನೀವು ಶಾಕ್

TAGGED:agricultureBharatsagarChitradurgaChitradurga NewsDr. Shivamurthy ShivacharyaKannada Newskannada suddiKarnataka Irrigation CorporationManoj KumarNammajana.comSirigereTungabhadraWaterಕನ್ನಡ ನ್ಯೂಸ್ಕನ್ನಡ ಸುದ್ದಿಕರ್ನಾಟಕ ನೀರಾವರಿ ನಿಗಮಕೃಷಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿಡಾ.ಶಿವಮೂರ್ತಿ ಶಿವಾಚಾರ್ಯತುಂಗಭದ್ರಾನಮ್ಮಜನ.ಕಾಂನೀರುಭರಮಸಾಗರಮನೋಜ್ ಕುಮಾರ್ಸಿರಿಗೆರೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Dina Bhavishya | ದಿನ ಭವಿಷ್ಯ | 06-07-2025
Next Article Gold Rate | ಇಂದು ಬಂಗಾರದ ಬೆಲೆ ಎಷ್ಟಿದೆ?
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

CM Siddaramaiah ಗೆ ಖುದ್ದು ಕೃತಜ್ಞತೆ ಸಲ್ಲಿಸಿದ ಮಾದಿಗರು : ಅಲೆಮಾರಿಗಳನ್ನು ಕೈಬಿಡದಂತೆ ಆಂಜನೇಯ ಆಗ್ರಹ
Blog ಇಂದಿನ ಸುದ್ದಿ
ಚಿತ್ರದುರ್ಗ | ವರ್ಷಿತಾ ಅಮ್ಮನ‌ ಬಳಿ ಮಾತಾಡಿದ್ದು ಕೊನೆಯಾದಾಗಿ ಯಾವಾಗ? ತಾಯಿ ಏನ್ ಹೇಳಿದರು | Varshita Murder Case
ಕ್ರೈಂ ಸುದ್ದಿ
ಚಿತ್ರದುರ್ಗ Varshita murder | ವರ್ಷಿತಾಳ ಕೊಲೆ ಕೇಸ್, ಸಚಿವ ಡಿ.ಸುಧಾಕರ್ ಹೇಳಿದ್ದೇನು | 5 ಲಕ್ಷ ಪರಿಹಾರ ಘೋಷಣೆ
ಇಂದಿನ ಸುದ್ದಿ
today Adike Rate : ಅಡಕೆ ಧಾರಣೆ | 20 ಆಗಸ್ಟ್‌ 2025 | ಚನ್ನಗಿರಿ, ಶಿವಮೊಗ್ಗ ಮಾರುಕಟ್ಟೆಯಲ್ಲಿ 61 ಸಾವಿರ ದಾಟಿದ ಅಡಿಕೆ
ಅಡಿಕೆ ಧಾರಣೆ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?