Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ
Blog

Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ

Editor Nammajana
Last updated: 11 May 2025 15:24
By Editor Nammajana 2 Min Read
Share
SHARE

Chitradurga news|nammajana.com|11-05-2025

ನಮ್ಮಜನ.ಕಾಂ, ಚಿತ್ರದುರ್ಗ: ನಗರ ದೇವತೆ ರಾಜ (Uchchhangi Yallamma)ಉತ್ಸವಾಂಬಾ ಉಚ್ಚಂಗಿ ಯಲ್ಲಮ್ಮ ದೇವಿಯ ಮೆರವಣಿಗೆ ಶುಕ್ರವಾರ ನಗರದ ರಾಜ ಬೀದಿಗಳಲ್ಲಿ ಅದ್ದೂರಿಯಾಗಿ ನಡೆಯಿತು.

ಇದೇ ಮೊದಲ ಬಾರಿಗೆ ತಿರುಗುವ ಮಾದರಿಯಲ್ಲಿ ಚಾಮುಂಡೇಶ್ವರಿ ಹಾಗೂ ಕಾಳಿಮಾತೆ ದೇವಿಯರ ಅಲಂಕಾರ ಮಾಡಿದ್ದು ಭಕ್ತರ ಗಮನ ಸೆಳೆಯಿತು.

ಉತ್ಸವದ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಅಭಿಷೇಕ ಸೇರಿ ಪೂಜಾ ಕಾರ್ಯಗಳು ನೆರವೇರಿದವು. ಚಾಮುಂಡೇಶ್ವರಿ ಮಾದರಿಯ ಆಲಂಕಾರದಲ್ಲಿ ದೇವಿ ಒಂದು ಕೈಯಲ್ಲಿ ತ್ರಿಶೂಲ, ಇನ್ನೊಂದು ಕೈಯಲ್ಲಿ ಕತ್ತಿ, ಮತ್ತೊಂದು ಕೈಯಲ್ಲಿ ಶಂಖ ಹಿಡಿದು ಅಶ್ವರೂಢಳಾಗಿದ್ದ  ಮತ್ತೊಂದೆಡೆ (Uchchhangi Yallamma) ರುಂಡಗಳ ಮಾಲೆ ಧರಿಸಿ, ಎಡಗೈಲಿ ರುಂಡ ಹಿಡಿದು, ಬಲಗೈಲಿ ಭಕ್ತರನ್ನು ಹರಿಸುತ್ತಿರುವ ಕಾಳಿ ಮಾತ ಮಾದರಿಯಲ್ಲಿ ರಾರಾಜಿಸಿದ್ದು ವಿಶೇಷವಾಗಿತ್ತು.

ಬಂಗಾರದ ಮುಖಪದ್ಮದ ಉತ್ಸವ ಮೂರ್ತಿಯನ್ನು ಗುಲಾಬಿ, ಸೇವಂತಿಗರ ಚೆಂಡು ಮತ್ತಿತರ ಹೂವುಗಳಿಂದ ಜೋಡಿಸಿದ ಮಾಲೆಗಳು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಲಾಗಿತ್ತು.ಮುಂಜಾನೆಯಿಂದ ಆರಂಭವಾದ ಅಲಂಕಾತ 10-30 ರವೇಳೆಗೆ ಅಂತಿಮ ಸ್ಪರ್ಶ ಪಡೆಯಿತು.

ಎತ್ತಿನ ಬಂಡಿಯಲ್ಲಿ ಕೂರಿಸಲಾಯಿತು. ಬಳಿಕ ಮಹಾಮಂಗಳಾರತಿ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ತೀರ್ಥಹಳ್ಳಿಯ ಚಂಡೆ, ವೀರಗಾಸೆ, ನಂದಿಕೋಲು, ಕರಡಿ ಸಮ್ಮಾಳ, ಉರುಮೆ, ಗೊಂಬೆ ಕುಣಿತ, ಟ್ರ್ಯಾಶ್ ಸೇರಿದಂತೆ ಮತ್ತಿತರ ಜನಪದ ಕಲಾ ಮೇಳಗಳು ಗಮನಸೆಳೆದವು. ಹುಲಿ, ನವಿಲುಗಳ ಮಾದರಿಗಳ ನರ್ತನ,ಬೆಂಕಿಯ ಹೊಗೆ ಹೊರಸೂಸುವ ಕಲೆಗಳು ಆಕರ್ಷಿಸಿದವು.

ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮೆರವಣಿಗೆ ಚಿಕ್ಕಪೇಟೆ, ಬುರುಜನಹಟ್ಟಿ, ಸಿಹಿನೀರು ಹೊಂಡ, ದೊಡ್ಡಪೇಟೆಯ ಉಯ್ಯಾಲೆ ಕಂಬದ ಬಳಿ ‘ಉಧೋ ಉಧೋ ಎಂಬ ಜಯಘೋಷ ಮೊಳಗಿದವು. ಗೊಂಬೆ ವೇಷಧಾರಿಗಳು ವಿಶೇಷವಾಗಿ ಗಮನ ಸೆಳೆದರು. ಯುವಕರು ವಾದ್ಯಕ್ಕೆ ತಕ್ಕಂತೆ ಕುಣಿದು ಸಂಭ್ರಮಿಸಿದರು.

ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತ, ಎಸ್‌ಬಿಎಂ (Uchchhangi Yallamma)  ಸರ್ಕಲ್, ಧರ್ಮಶಾಲೆ ರಸ್ತೆ, ರಸ್ತೆ, ದೊಡ್ಡಪೇಟೆ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್ ರಸ್ತೆ ಮಾರ್ಗವಾಗಿ ದೇವಸ್ಥಾನ ತಲುಪಿತು.

ದೇವಿಯ ಆಗಮನಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ ಭಕ್ತರು ಮಡಿಯಿಂದ ತಮ್ಮ ಮನೆಗಳ ಮುಂದೆ ನೀರು ಹಾಕಿ ಶುಭ್ರಗೊಳಿಸಿದರು. ಬಳಿಕ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಹಾಕಿ ಸ್ವಾಗತಿಸಿದರು. ಅಲ್ಲಲ್ಲಿ ಮಜ್ಜಿಗೆ, ನಿರ್ದೇಶನ ಪಾನಕ ಕೊಸಂಬರಿ ವಿತರಿಸಲಾಯಿತು.

ಇದನ್ನೂ ಓದಿ:  Nagarasabhe | ಆಸ್ತಿ ತೆರಿಗೆ ಶೇ.5ರ ರಿಯಾಯಿತಿ | ಜೂನ್ 30 ರವರೆಗೆ ಅವಧಿ ವಿಸ್ತರಣೆ

ಮಂಗಳವಾರ ಜಾತ್ರೆಗೆ ತೆರೆ

ಜಾತ್ರಾ ಮಹೋತ್ಸವದ ಪ್ರಯುಕ್ತ ಮೇ 10ರಂದು ದೇವಿಗೆ ವಿಶೇಷ ಭಂಡಾರ ಪೂಜೆ ಹಾಗೂ ಪುಷ್ಪಾಲಂಕಾರದೊಂದಿಗೆ ಪೂಜೆ ನೆರವೇರಲಿದೆ. ಸಂಜೆ ದೇವಸ್ಥಾನದ ಮುಂಭಾಗದಲ್ಲಿ ಸಿಡಿ ಉತ್ಸವ ಜರುಗಲಿದೆ. ಹರಕೆ ಹೊತ್ತ ಭಕ್ತರಿಂದ ಸಿಡಿ ಸೇವೆ ನಡೆಯಲಿದೆ.

11ರಂದು ಬೆಳಿಗ್ಗೆ ಅಭಿಷೇಕ, ಮಹಾಮಂಗಳಾರತಿ ಬಳಿಕ ರಾತ್ರಿ 9ಕ್ಕೆ ದೇವಿಯ ಮಹಾ ಭಕ್ತರಾದ ಜೋಗಪ್ಪ ಮತ್ತು (Uchchhangi Yallamma)  ಜೋಗಮ್ಮನವರಿಂದ ಓಕಳಿ ಸೇವೆ ಜರುಗಲಿದೆ. 13ರಂದು ಬೆಳಿಗ್ಗೆ ಅಭಿಷೇಕ ನಡೆದ ನಂತರ ಕಂಕಣ ವಿಸ-ರ್ಜನೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.

ಇದನ್ನೂ ಓದಿ: World Record | ಶ್ರೀಆಂಜನೇಯಸ್ವಾಮಿ ರೇಖಾ ಚಿತ್ರಕ್ಕೆ ಗ್ಲೋಬಲ್ ವರ್ಲ್ಡ್ ರೆಕಾರ್ಡ್ | ಸಿಎಂ ಅಭಿನಂದನೆ

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

TAGGED:ChitradurgafairGrand ProcessionRajbeediUchhangi Yellammaಉಚ್ಚಂಗಿ ಯಲ್ಲಮ್ಮಚಿತ್ರದುರ್ಗಜಾತ್ರೆಭವ್ಯ ಮೆರವಣಿಗೆರಾಜಬೀದಿ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Nagarasabhe | ಆಸ್ತಿ ತೆರಿಗೆ ಶೇ.5ರ ರಿಯಾಯಿತಿ | ಜೂನ್ 30 ರವರೆಗೆ ಅವಧಿ ವಿಸ್ತರಣೆ
Next Article Illegal marijuana | ಗಾಂಜಾ ಮಾರಾಟ ವ್ಯಕ್ತಿಯಿಂದ ಪೋಲಿಸ್ ಮೇಲೆ ಹಲ್ಲೆಗೆ ಯತ್ನ, ಪೋಲಿಸರಿಂದ ವ್ಯಕ್ತಿ ಕಾಲಿಗೆ ಗುಂಡು
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?