Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Upper Bhadra | ಭದ್ರಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಹಣ ನೀಡಿ: ಟಿ.ರಘುಮೂರ್ತಿ ಡಿಮ್ಯಾಂಡ್
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Upper Bhadra | ಭದ್ರಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಹಣ ನೀಡಿ: ಟಿ.ರಘುಮೂರ್ತಿ ಡಿಮ್ಯಾಂಡ್
ಇಂದಿನ ಸುದ್ದಿ

Upper Bhadra | ಭದ್ರಾ ಮೇಲ್ದಂಡೆ ಯೋಜನೆಗೆ 10 ಸಾವಿರ ಕೋಟಿ ಹಣ ನೀಡಿ: ಟಿ.ರಘುಮೂರ್ತಿ ಡಿಮ್ಯಾಂಡ್

Editor Nammajana
Last updated: 19 March 2025 17:03
By Editor Nammajana 2 Min Read
Share
SHARE

Chitradurga news|nammajana.com|19-03-2025

ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯದ ಮದ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಭದ್ರಾಮೇಲ್ದಂಡೆ ಯೋಜನೆ ಮೂಲಕ (Upper Bhadra) ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ವಿಧಾನಸೌದದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಭದ್ರಾಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಬುಧವಾರ ನಡೆದ ಅಧಿವೇಶನದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಕೇಂದ್ರ ಸರ್ಕಾರ 2023-4ನೇ ಸಾಲಿನ ಆಯವ್ಯಯದಲ್ಲಿ ಭದ್ರಾಮೇಲ್ದಂಡೆಯೋಜನೆಗೆ 5300 ಕೋಟಿ ಹಣ ನೀಡುವ ಪ್ರಸ್ತಾಪನೆ ಮಾಡಿದ್ದು ಇದುವರೆಗೂ ಹಣ ನೀಡಿಲ್ಲ. 2025-26ನೇಸಾಲಿನ ಆಯವ್ಯಯದಲ್ಲಿ 2600ಕೋಟಿ ಹಣನೀಡುವ ಭರವಸೆ ನೀಡಿದ್ದಾರೆ.

ಒಟ್ಟಾರೆಯಾಗಿ ಯೋಜನೆಗೆ 21500ಕೋಟಿ ಹಣ ಬೇಕಿದ್ದು, ಈಗಾಗಲೇ 10500 ಕೋಟಿ ವೆಚ್ಚವಾಗಿದೆ. ಇನ್ನೂ 10 ಸಾವಿರ ಕೋಟಿ ಹಣ ಬೇಕಿದ್ದು ಮುಖ್ಯಮಂತ್ರಿಗಳು 2611 ಕೋಟಿ ನೀಡಿ ಕೇಂದ್ರ ಸರ್ಕಾರ 5300ಕೋಟಿ ನೀಡಿದರೆ ಯೋಜನೆ (Upper Bhadra) ಪೂರ್ಣಗೊಳ್ಳಲು ಅವಶ್ಯವಿರುವ 5 ಸಾವಿರ ಕೋಟಿ ಹಣವನ್ನು ರಾಜ್ಯಸರ್ಕಾರ ನೀಡಿ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಬೇಕು.

ಒಟ್ಟು 29.9 ಟಿಎಂಸಿ ನೀರು ಲಭ್ಯವಿದ್ದು, 21.9 ಟಿಎಂಸಿ ನೀರಿನಲ್ಲಿ ಹನಿನೀರಾವರಿ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ, 6 ಟಿಎಂಸಿ ನೀರು 767 ಕೆರೆ ತುಂಬಿಸಲು, ವಾಣಿವಿಲಾಸಸಾಗರಕ್ಕೆ 2 ಟಿಎಂಸಿ ನೀರು ಸಿಗಲಿದೆ.

ಆದರೆ, ಈ ಯೋಜನೆಗೆ ಸಕಾಲದಲ್ಲಿ ಹಣ ನೀಡದ ಹಿನ್ನೆಲೆಯಲ್ಲಿ ಭದ್ರಾಮೇಲ್ದಂಡೆ ಯೋಜನೆ ಕಾರ್ಯಗತವಾಗುವುದೇ ಎಂಬ ಅನುಮಾನ ಜನರದ್ದಾಗಿದೆ.

ಕಳೆದ ಹಲವಾರು ದಶಕಗಳಿಂದ ಜನರಿಗೆ ಆಳಿದ ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಾ ಬಂದಿವೆ. ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2028 ರೊಳಗೆ ಈ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದ್ದರಿಂದ ಮುಖ್ಯಮಂತ್ರಿಗಳು ಈ ಯೋಜನೆಗೆ ಅಗತ್ಯವಿರುವ 10 ಸಾವಿರ ಕೋಟಿಹಣವನ್ನು ಬಿಡುಗಡೆಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕರಾಗಿ ಮೂರನೇ ಬಾರಿಗೆ ಆಯ್ಕೆಯಾದ ಟಿ.ರಘುಮೂರ್ತಿ ಪ್ರತಿ ಅಧಿವೇಶನದಲ್ಲೂ ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟಂತೆ ಹಲವಾರು ಬಾರಿ ಪ್ರಶ್ನಿಸಿ ಸರ್ಕಾರದಿಂದ ಸೂಕ್ತ ಉತ್ತರ ಪಡೆದಿದ್ದಾರೆ. ಇವರ ಕೋರಿಕೆಯಂತೆ ಕೆಲವೊಂದು ಯೋಜನೆಗೆ ಮಾತ್ರ ಸರ್ಕಾರ ಅನುದಾನ ನೀಡಿದೆ. ಇನ್ನೂ ಹಲವಾರು ಯೋಜನೆಗೆ ಅನುದಾನ ನೀಡಬೇಕಿದೆ, ರಘುಮೂರ್ತಿಯವರು ಸದನದಲ್ಲಿ (Upper Bhadra) ಪ್ರಸ್ತಾಪಿಸಿದಂತೆ ಸರ್ಕಾರ ಹಣ ನೀಡಿದರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಇನ್ನೂ ಹೆಚ್ಚು ಶಕ್ತಿಬರಲಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬಾಕ್ಸ್

ಮಧ್ಯ ಕರ್ನಾಟಕದ ಜನರ ಕನಸಾಗಿರುವ ಭದ್ರಾ ಯೋಜನೆ ಪೂರ್ಣಕ್ಕೆ ನಮ್ಮ ಮುಖ್ಯಮಂತ್ರಿಗಳಿಂದ 10 ಸಾವಿರ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ. 2028 ಭದ್ರಾ ಯೋಜನೆ ಪೂರ್ಣಗೊಳಲು ಈಗ ನೀಡಿರುವ 2611 ಕೋಟಿ‌ ಜೊತೆಗೆ ಇದೇ ವರ್ಷದಲ್ಲಿ 5 ಸಾವಿರ ಕೋಟಿ ಹಣ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು  ರಾಜ್ಯದ ಸಂಸದರು ಸಹ ಪಕ್ಷಾತೀತವಾಗಿ ಭದ್ರಾ ಯೋಜನೆಯ ಹಣ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ. 

ಟಿ.ರಘುಮೂರ್ತಿ 

ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ 

ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ 

You Might Also Like

Transfer | ಜಿಲ್ಲಾ ಬಿಸಿಎಂ ಅಧಿಕಾರಿ ಆರ್.ಸುಬ್ರಾನಾಯಕ್ ವರ್ಗಾವಣೆ, ನೂತನ ಅಧಿಕಾರಿ ಅಧಿಕಾರ ಸ್ವೀಕಾರ

POWER CUT | ಇಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಏರಿಕೆ

POWER CUT | ಇಂದಿನಿಂದ ಎರಡು ದಿನ ಬೆಳಗ್ಗೆಯಿಂದ ಸಂಜೆವರೆಗೂ ಕರೆಂಟ್ ಇರಲ್ಲ

Gold Rate | ಬಂಗಾರದ ಬೆಲೆಯಲ್ಲಿ ಭರ್ಜರಿ ಏರಿಕೆ

TAGGED:10 thousand crores10 ಸಾವಿರ ಕೋಟಿBhadra Upper River ProjectChallakereChitradurga DistrictDemand for FundsLegislative Assembly SessionMLARelease of FundsT Raghumurthyಚಳ್ಳಕೆರೆಚಿತ್ರದುರ್ಗ ಜಿಲ್ಲೆಟಿ ರಘುಮೂರ್ತಿಭದ್ರಾ ಮೇಲ್ದಂಡೆ ಯೋಜನೆವಿಧಾನ ಸಭೆ ಅಧಿವೇಶನಶಾಸಕಹಣ ಬಿಡುಗಡೆಹಣಕ್ಕೆ ಬೇಡಿಕೆ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Adike rate | ಚನ್ನಗಿರಿ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್
Next Article Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಲಾಭ, ನಷ್ಟ ನೋಡಿ
ದಿನ ಭವಿಷ್ಯ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ?
ದಿನ ಭವಿಷ್ಯ
Adike rate | ಅಡಿಕೆ ಬೆಲೆಯಲ್ಲಿ ಇಳಿಕೆ
ಅಡಿಕೆ ಧಾರಣೆ
Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ ಯೋಗ?
ದಿನ ಭವಿಷ್ಯ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?