Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Urea | ಯೂರಿಯ ಗೊಬ್ಬರಕ್ಕಾಗಿ ದಿನಗಟ್ಟಲೇ ರೈತರ ಪರದಾಟ
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ಇಂದಿನ ಸುದ್ದಿ > Urea | ಯೂರಿಯ ಗೊಬ್ಬರಕ್ಕಾಗಿ ದಿನಗಟ್ಟಲೇ ರೈತರ ಪರದಾಟ
ಇಂದಿನ ಸುದ್ದಿ

Urea | ಯೂರಿಯ ಗೊಬ್ಬರಕ್ಕಾಗಿ ದಿನಗಟ್ಟಲೇ ರೈತರ ಪರದಾಟ

Editor Nammajana
Last updated: 3 September 2025 5:23 PM
By Editor Nammajana 2 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|3-8-2025

ನಮ್ಮಜನ.ಕಾಮ, ಚಳ್ಳಕೆರೆ: ಕಳೆದ ತಿಂಗಳು ತಾಲ್ಲೂಕಿನಾದ್ಯಂತ ಉತ್ತಮ ಹದಮಳೆಯಾಗಿದ್ದು ರೈತರು ಕೃಷಿ ಚಟುವಟಿಕೆಗೆ (Urea) ಚಾಲನೆ ನೀಡಿದ್ಧಾರೆ. ಮಳೆಯ ಅಭಾವದಿಂದ ಸ್ವಲ್ಪಭಾಗದ ಜಮೀನನ್ನು ಬಿತ್ತನೆ ಮಾಡಿದ್ದ ರೈತರಿಗೆ ಆಗಸ್ಟ್ ತಿಂಗಳಲ್ಲಿ ಬಂದ ಮಳೆ ಬೂಸ್ಟ್ ನೀಡಿದಂತಾಗಿದೆ.

ahobala tvs ದಸರಾ ಹಾಗು ದೀಪಾವಳಿ ಹಬ್ಬದ ವಿಶೇಷ ಕೊಡುಗೆಗಳು 2

ತಾಲ್ಲೂಕಿನಾದ್ಯಂತ ಎಲ್ಲಿನೋಡಿದರೂ ಹಸಿರಿನ ವಾತಾವರಣವಿದ್ದು ಚಳ್ಳಕೆರೆ ತಾಲ್ಲೂಕು ಮಲೆನಾಡಿನ ಒಂದುಭಾಗವೆನ್ನಿಸುತ್ತಿದೆ.

ಸಕಾಲದಲ್ಲಿ ಮಳೆಬಾರದೆ ಕಂಗಾಲಾಗಿದ್ದ ರೈತ ದಿಢೀರನೆ ಎರಡೂ ಮಳೆಗೂ ನಿರಂತರ ಸುರಿದ ಪರಿಣಾಮ ರೈತರು ಜಾಗೃತಗೊಂಡು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ಧಾರೆ. ಈಗಾಗಲೇ ಶೇಂಗಾ ಬಿತ್ತನೆ ಮಾಡಿದ ರೈತರು ಕಳೆತಗೆಸಿ, ಎಡೆಕುಂಟೆ ಹೊಡೆಸುವ ಕಾರ್ಯದಲ್ಲಿ ಮಗ್ನರಾಗಿದ್ಧಾರೆ.

ಈ ಮಧ್ಯೆ ರೈತರಿಗೆ ಶೇಂಗಾ ಬೆಳೆ ಉತ್ತಮವಾಗಿ ಬೆಳೆಯಲು ಯೂರಿಯ ಗೊಬ್ಬರ ಅಗತ್ಯವಿದ್ದು ಎಲ್ಲಾ ಗೊಬ್ಬರದ ಸೊಸೈಟಿಗಳ ಮುಂದೆ ರೈತರು ಮುಂಜಾನೆಯೇ ಬಂದು ಸರಥಿ ಸಾಲಿನಲ್ಲಿ ನಿಂತು ಗೊಬ್ಬರ ಖರೀದಿಸಲು ಮುಂದಾಗಿದ್ದಾರೆ.

ಎಲ್ಲಾ ಗೊಬ್ಬರದ ಸೊಸೈಟಿಗಳ ಮುಂದೆ ರೈತರು ಯೂರಿಯ ಗೊಬ್ಬರ ಖರೀದಿಸಲು ದುಂಬಾಲು ಬಿದ್ದಿದ್ದಾರೆ. ಯೂರಿಯ (Urea) ಗೊಬ್ಬರಕ್ಕಾಗಿ ಬೆಳಗಿನಿಂದ ಸಂಜೆ ತನಕ ಕಾದುಕಾದು ಗೊಬ್ಬರ ಪಡೆಯಲು ಹಾತುವರೆಯುತ್ತಿದ್ಧಾರೆ. ಆದರೆ, ಹೆಚ್ಚಿನ ಭಾಗದ ರೈತರಿಗೆ ಯೂರಿಯ ಗೊಬ್ಬರ ಮರಿಚಿಕೆಯಾಗಿದೆ.

ರೈತರು ಎಷ್ಟೇಕಷ್ಟವಾದರೂ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ಧಾರೆ. ಯೂರಿಯ ಗೊಬ್ಬರ ಹಾಕಿದರೆ ಬೆಳೆ ಹುಲುಸಾಗಿ ಬೆಳೆಯುತ್ತದೆ ಎಂಬ ಪ್ರತೀತಿ ಇರುವ ಹಿನ್ನೆಲೆಯಲ್ಲಿ ರೈತರು ಯೂರಿಯ ಖರೀದಿಗೆ ಮುಂದಾಗಿದ್ಧಾರೆ.

ಅನೇಕ ರೈತರು ಪತ್ರಿಕೆಯೊಂದಿಗೆ ಮಾತನಾಡಿ, ಸರ್ಕಾರ ಇಂತಹ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದ ಯೂರಿಯ ಗೊಬ್ಬರ (Urea) ಸರಬರಾಜು ಮಾಡಿ ರೈತರ ನೆರವಿಗೆ ದಾವಿಸಬೇಕು, ಒಂದು ಆಧಾರ್ ಕಾರ್ಡ್ಗೆ ಎರಡು ಪಾಕೇಟ್ ಮಾತ್ರ ನೀಡಲಾಗುತ್ತಿದೆ. ಒಂದು ಪಾಕೇಟ್ ಯೂರಿಯ ೩೦೦ರೂ ನೀಡಬೇಕಿದೆ.

ಒಟ್ಟಿನಲ್ಲಿ ರೈತರು ಯೂರಿಯ ಗೊಬ್ಬರ ಪಡೆಯಲು ಸೊಸೈಟಿಗಳ ಮುಂದೆ ನಿತ್ಯಕಾಯುವ ಸ್ಥಿತಿ ಉಂಟಾಗಿದೆ. ಸಂಬAಧಪಟ್ಟ ಅಧಿಕಾರಿಗಳು ರೈತರಿಗೆ ಸುಲಭವಾಗಿ ಯೂರಿಯ ಗೊಬ್ಬರ ಲಭ್ಯವಾಗುವಂತೆ ಮಾಡಬೇಕಿದೆ.

ಇದನ್ನೂ ಓದಿ: Adike Rate | 03 ಸೆಪ್ಟೆಂಬರ್ 2025 | ಅಡಕೆ ಧಾರಣೆ | ಭೀಮಸಮುದ್ರ ಅಡಿಕೆ ರೇಟ್ ಎಷ್ಟಿದೆ?

ಸಹಾಯಕ ಕೃಷಿ ನಿರ್ದೇಶಕ ಜೆ.ಅಶೋಕ್ ಮಾತನಾಡಿ, ಕೆಲವು ತಿಂಗಳ ಬಿಡುವಿನ ನಂತರ ದಿಢೀರನೆ ಮಳೆ ಬಂದಿರುವುದು ಎಲ್ಲೆಡೆ ಒಂದೇ ಹಂತದಲ್ಲಿ ಕೃಷಿ ಚಟುವಟಿಕೆಗೆ ರೈತರು ಚಾಲನೆ ನೀಡಿ ಯೂರಿಯ ಖರೀದಿಸಲು ಮುಂದಾಗಿದ್ಧಾರೆ. ಆದರೆ, ಸರ್ಕಾರ ಇದುವರೆಗೂ ತಾಲ್ಲೂಕಿನಾದ್ಯಂತ 4700 ಟನ್ (Urea) ಯೂರಿಯ ಗೊಬ್ಬರವನ್ನು ಸೊಸೈಟಿಗಳ ಮೂಲಕ ವಿತರಣೆ ಮಾಡಲಾಗಿದೆ. ಗೊಬ್ಬರ ಅಭಾವವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.

Telegram Group Join Now
WhatsApp Group Join Now

You Might Also Like

Gold price | ಬಂಗಾರದ ಬೆಲೆಯಲ್ಲಿ ಇಳಿಕೆ

ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ | ED Raid challakere

Challakere Rain | ಹಸ್ತ ಮಳೆಗೆ ಮುಳುಗಿದ ಲಾರಿ, ಕಾರು, ಮನೆಗಳು

Astrology | ಇಂದಿನ‌ ರಾಶಿ ಭವಿಷ್ಯ, ಯಾರಿಗೆಲ್ಲ ಶುಭ, ಅಶುಭ

ದಿನ ಭವಿಷ್ಯ | 09-10-2025 | Dina Bhavishya

TAGGED:ChallakereChitradurgaNammajana.comParadaraithaureaಚಳ್ಳಕೆರೆಚಿತ್ರದುರ್ಗನಮ್ಮಜನ.ಕಾಂಪರದಾಟಯುರಿಯಾರೈತ
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink0
Previous Article Adike Rate | 03 ಸೆಪ್ಟೆಂಬರ್ 2025 | ಅಡಕೆ ಧಾರಣೆ | ಭೀಮಸಮುದ್ರ ಅಡಿಕೆ ರೇಟ್ ಎಷ್ಟಿದೆ?
Next Article ಮೇದಾರ ಅಭಿವೃದ್ಧಿ ನಿಗಮ : ನೇರ ಸಾಲ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಅಹ್ವಾನ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Gold price rise | ಬಂಗಾರದ ಓಟಕ್ಕೆ ಬ್ರೇಕ್ ಹಾಕೋರಿಲ್ಲ, ಎಷ್ಟಿದೆ ಇಂದಿನ ಬೆಲೆ
ಇಂದಿನ ಸುದ್ದಿ
V V Sagara Dam | ವಾಣಿ ವಿಲಾಸ ಸಾಗರ ಡ್ಯಾಂ ಲೇವೆಲ್ ಎಷ್ಟು | ಇಲ್ಲಿದೆ ಮಾಹಿತಿ
ಇಂದಿನ ಸುದ್ದಿ
Astrology | ದಿನ ಭವಿಷ್ಯ, ಇವತ್ತು ಹೇಗಿದೆ ರಾಶಿ ಭವಿಷ್ಯ
ದಿನ ಭವಿಷ್ಯ
ವಾಲ್ಮೀಕಿ ಜಯಂತಿ ಅದ್ದೂರಿ ಮೆರವಣಿಗೆಗೆ ಶಾಸಕ ಟಿ.ರಘುಮೂರ್ತಿ ಚಾಲನೆ | Valmiki Jayanti
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

More

  • About Us!
  • Blog
  • Contact Us
  • Customize Interests
  • Disclaimer
  • Kannada News- NammaJana
  • My Bookmarks
  • ಶ್ರೀ ಅಹೋಬಲ ಟಿವಿಎಸ್

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?