Chitradurga News | Nammajana.com |07-08-2025
ನಮ್ಮಜನ.ಕಾಂ, ಚಿತ್ರದುರ್ಗ: ಕೋಟೆನಾಡಲ್ಲಿ(Urea) ರೈತರಿಗೆ ತಪ್ಪದ ರಸಗೊಬ್ಬರ ಸಂಕಷ್ಟ. ಚಿತ್ರದುರ್ಗ ಜಿಲ್ಲೆಯಲ್ಲಿ ಯುರಿಯಾ ಕೊರತೆಗೆ ನಲುಗಿದ ರೈತರು. ಮಕ್ಕಳು ಮರಿ, ವೃದ್ದರುನ್ನೂ ಸೇರಿ ಗೊಬ್ಬರಕ್ಕಾಗಿ ಎಪಿಎಂಸಿ ಬಳಿ ಕ್ಯೂ ನಿಂತ್ತಿರುವ ರೈತರು.

ಇದನ್ನೂ ಓದಿ: ಅನಗತ್ಯವಾಗಿ ಶಾಸಕರ ಹೆಸರು ಪ್ರಸ್ತಾಪ, BJP ಸಂಸರಿದ್ದು ಡಂಪಿಂಗ್ ಯಾರ್ಡ್ ಅಗತ್ಯವಿದ್ದರೆ ಸ್ಥಳಾಂತರಿಸಿಕೊಳ್ಳಲಿ: ಕೆ.ವೀರಭದ್ರಪ್ಪ
ಸಮರ್ಪಕ ಯುರಿಯಾ ಸಿಗದೆ ಬೆಳಗ್ಗೆಯಿಂದ ಕ್ಯೂ ನಿಂತ ರೈತರು. ಒಬ್ಬರಿಗೆ 2 ಚೀಲ ನೀಡಲು ಅಧಿಕಾರಿಗಳ ನಿರ್ದೇಶನದ ಹಿನ್ನಲೆ. ಶಾಲೆ ಬಿಡಿಸಿ ಮಕ್ಕಳನ್ನೂ ಕ್ಯೂ ನಿಲ್ಲಿಸಿ ಕಾಯುತ್ತಿರುವ ಸಾವಿರಾರು ರೈತರು.
ಊಟ, ನೀರು ಬಿಟ್ಟು ಕಾದು ಕಾದು ಸುಸ್ತಾದ ಮಕ್ಕಳು, ಮಹಿಳೆಯರು. ಗೊಬ್ಬರ ವಿತರಣೆಗೂ ಕೈ ಬೆರಳಿಗೆ ರೆಡ್ ಇಂಕ್ ಹಚ್ಚಿದ ವಿತರಕರು. ನಿರಂತರ ಮಳೆಗೆ ಶೀತದಿಂದ ಸೊರಗಿರುವ ಮೆಕ್ಕೆಜೋಳ ಬೆಳೆಗಳು. ಯುರಿಯಾ ಹಾಕದಿದ್ರೆ ಬೆಳೆ ಹಾಳಾಗುವ ಆತಂಕದಲ್ಲಿ ರೈತರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ ಏರಿಕೆ
ಸಮರ್ಪಕ ಯುರಿಯಾ ಸಪ್ಲೆ(Urea) ಮಾಡದ ಕೃಷಿ ಇಲಾಖೆ, ಸರ್ಕಾರಕ್ಕೆ ರೈತರ ಹಿಡಿ ಶಾಪ. ರೈತರ ಸಮಸ್ಯೆ ಆಲಿಸದ ಸರ್ಕಾರ, ಸಿಎಂ ವಿರುದ್ದ ರೈತರ ಆಕ್ರೋಶ. ಸರ್ಕಾರ ಇದನ್ನೂ ನೋಡಬೇಕು, ಅವರ ಹೆಂಡ್ರು ಮಕ್ಕಳು ಈ ವೇದನೆ ಅನುಭವಿಸಿದ್ರೆ ಗೊತ್ತಾಗತ್ತೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
