Chitradurga news|nammajana.com|9-12-2024
ನಮ್ಮಜನ.ಕಾಂ, ಚಿತ್ರದುರ್ಗ: ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಪರಿಣಾಮ ರಾಜ್ಯದಲ್ಲಿ ತರಕಾರಿಗಳ ಬೆಲೆ (Vegetable price) ಗಗನಕ್ಕೇರಿದೆ. ಬಹುದಿನಗಳಿಂದ ಏರುಗತಿಯಲ್ಲೇ ಇರುವ ಬೆಳ್ಳುಳ್ಳಿ ಜತೆಗೆ ನುಗ್ಗೆಕಾಯಿ ಬೆಲೆ ರೂ 500. ನುಗ್ಗಿ ಕಾಯಿ 500 ರೂಪಾಯಿ ಆದಂತಾಗಿದೆ. ಈರುಳ್ಳಿ ಬೆಲೆ ಕೂಡ ಕೆಜಿಗೆ 70-80 ರೂ.ಗೆ ತಲುಪಿದೆ. ಇತರ ಹಲವು ತರಕಾರಿಗಳ ದರ ಗ್ರಾಹಕರ ಜೇಬು ಸುಡುತ್ತಿದ್ದರೂ, ಬೆಲೆ ಏರಿಕೆ ಪ್ರಯೋಜನ ಬೆಳೆಗಾರರಿಗೆ ಸಿಗುತ್ತಿಲ್ಲ.
- ಬೆಳ್ಳುಳ್ಳಿ 450 – 500 ರೂ.
- ನುಗ್ಗೆಕಾಯಿ 450 – 500 ರೂ.
- ಈರುಳ್ಳಿ: 70-80 ರೂ
- ಟೊಮ್ಯಾಟೋ : 50 -60 ರೂ.
- ಕ್ಯಾರೆಟ್ : 65 – 70 ರೂ.
- ಬಿನ್ಸ್ : 77-80 ರೂ
- ಗೋರಿಕಾಯಿ: 65-70 ರೂ
- ತೊಂಡೆಕಾಯಿ: 65-70 ರೂ
- ಹಿರೇಕಾಯಿ : 45-50 ರೂ
- ಹಸಿಮೆಣಸು: 55-60 ರೂ.
- ಬಜ್ಜಿ ಮೆಣಸು: 40-45 ರೂ.
- ಬದನೆಕಾಯಿ: 50-55 ರೂ
- ಸುವರ್ಣಗಡ್ಡೆ: 65-70 ರೂ.
ಇದನ್ನೂ ಓದಿ: ವೇದಾಂತ ಮೈನ್ಸ್ | ಸ್ಥಳೀಯರಿಗೆ ಉದ್ಯೋಗ ನಿರಾಕರಣೆಗೆ ಸಂಘಟನೆಗಳ ಅಕ್ರೋಶ | Vedanta Mines

ಈ ಬೆಲೆ ಏರಿಕೆಗೆ ಕಾರಣ ಮಳೆಯಿಂದ ಆದ ತರಕಾರಿ ಬೆಳೆ ನಾಶ ಎಂದು ಹೇಳುತ್ತಿದ್ದಾರೆ. ಬೆಳ್ಳುಳ್ಳಿ ಬೆಲೆ ಮಾತ್ರ ಪ್ರತಿ ದಿನ ಏರಿಕೆ ಕಾಣುತ್ತಲೇ ಇದೆ, ಇದರ ಜೊತೆಗೆ ನುಗ್ಗಿಕಾಯಿ ಸಹ ಏರಿಕೆ ಕಾಣುತ್ತಿದ್ದು ತರಕಾರಿ ಬೆಲೆ ಮುಗಿಲು ಮುಟ್ಟಿದ್ದು (Vegetable price) ಗ್ರಾಹಕರು ಕಂಗಾಲಾಗಿದ್ದಾರೆ.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252