Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: VV Sagar | ಸಚಿವ ಮತ್ತು ಶಾಸಕರ ನಡುವೆ ಶಮನವಾಗದ ಮುನಿಸು! ವಿವಿ ಸಾಗರ ಬಾಗಿನ ಮುಂದಕ್ಕೆ? |
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > ದಿನ ಭವಿಷ್ಯ > VV Sagar | ಸಚಿವ ಮತ್ತು ಶಾಸಕರ ನಡುವೆ ಶಮನವಾಗದ ಮುನಿಸು! ವಿವಿ ಸಾಗರ ಬಾಗಿನ ಮುಂದಕ್ಕೆ? |
ದಿನ ಭವಿಷ್ಯ

VV Sagar | ಸಚಿವ ಮತ್ತು ಶಾಸಕರ ನಡುವೆ ಶಮನವಾಗದ ಮುನಿಸು! ವಿವಿ ಸಾಗರ ಬಾಗಿನ ಮುಂದಕ್ಕೆ? |

Editor Nammajana
Last updated: 18 January 2025 2:43 AM
By Editor Nammajana 4 Min Read
Share
SHARE
Telegram Group Join Now
WhatsApp Group Join Now

Chitradurga news|Nammajana.com|18-1-2025

ವಿಶೇಷ ವರದಿ: ಪಿ.ಟಿ. ಸಿದ್ಧೇಶ್ ಲಕ್ಕಿಹಳ್ಳಿ

ನಮ್ಮಜನ.ಕಾಂ, ಹೊಸದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರ್ಣವಾಗುವ ಮೊದಲೇ (VV Sagar) ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮತ್ತು ಜಿಲ್ಲೆಯ ಕೆಲ ಕಾಂಗ್ರೆಸ್ ಶಾಸಕರ ಮಧ್ಯೆ ವಿವಿಧ ವಿಚಾರಗಳಿಗೆ ಸಂಘರ್ಷ ಏರ್ಪಟ್ಟಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೀದಿಗ, ಸಚಿವರು ಮತ್ತು ಶಾಸಕರ ನಡುವಿನ ಒಳ ಜಗಳದ ಬೇಗುದಿ ವಿವಿ ಸಾಗರ ಜಲಾಶಯದ ವಿಚಾರವಾಗಿ ಬಹಿರಂಗಗೊಂಡಿದೆ.

nammajana

ಇತ್ತೀಚೆಗೆ, ಪತ್ರಿಕಾಗೋಷ್ಠಿ ನಡೆಸಿದ್ದ ಹೊಸದುರ್ಗ ಕ್ಷೇತ್ರದ ಶಾಸಕ ಬಿ.ಜಿ. ಗೋವಿಂದಪ್ಪ ‘ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ. ಸುಧಾಕರ್ ತಮ್ಮ ಕೆಲಸಗಳನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ.

ಜಿಲ್ಲೆಯ ಉಸ್ತುವರಿ ವಹಿಸಿಕೊಂಡಿರುವವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆ ವಿನಃ ಒಂದು ತಾಲೂಕಿಗೆ ಸೀಮಿತವಾದರೆ ಹೇಗೆ? ಅವರ ಕರ್ತವ್ಯ ಮತ್ತು (VV Sagar) ಜವಾಬ್ದಾರಿಗಳನ್ನು ನೆನಪಿಸಿ ಕೊಳ್ಳಬೇಕಾದ ಸಂದರ್ಭ ಸೃಷ್ಟಿಯಾಗಿದೆ ಎಂದು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದರು.

ಜಿಲ್ಲಾ ಡಿಸಿಸಿ ಬ್ಯಾಂಕ್ ಗೆ ಸಚಿವ ಸುಧಾಕರ್ ಅವರೇ ಇದೀಗ ಅಧ್ಯಕ್ಷರಿದ್ದಾರೆ. ಬ್ಯಾಂಕ್ ಚುನಾವಣೆಯ ಸಂದರ್ಭದಲ್ಲಿ ಸಚಿವ ಮತ್ತು ಶಾಸಕರ ನಡುವೆ ಸಣ್ಣದಾಗಿ ವೈಮನಸ್ಸು ಮೂಡಿತ್ತು. (VV Sagar) ಹೊಸದುರ್ಗದ ಶಾಸಕ ಗೋವಿಂದಪ್ಪ ಮಾತ್ರವಲ್ಲದೇ, ಇತರ ಶಾಸಕರು ಕೂಡ ಬೇಸರಗೊಂಡಿದ್ದರು.

ಏಕಾಏಕಿ ಸಚಿವರ ನಿರ್ಧಾರಕ್ಕೆ ಶಾಸಕರ ವಿರೋಧ

ಅಲ್ಲದೇ ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮದ ವಿಚಾರವಾಗಿ ಸಚಿವರು ಜಿಲ್ಲೆಯ ಯಾವುದೇ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಮ್ಮ ಸ್ವ-ನಿರ್ಧಾರದಿಂದ ಇದೇ ತಿಂಗಳ ಜನವರಿ 18 ರ ಶನಿವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರವರನ್ನು ಕರೆಸಿ ಕಾರ್ಯಕ್ರಮ ಆಯೋಜಿಸುವ ಸಿದ್ಧತೆ ನಡೆಸಿದ್ದರಿಂದ ಶಾಸಕರು ಮತ್ತಷ್ಟು ಕೆರಳಿದ್ದಾರೆ. ಹಾಗಾಗಿಯೇ, ಬಾಗಿನ ಅರ್ಪಿಸುವ (VV Sagar) ಕಾರ್ಯಕ್ರಮ ಮುಂದಕ್ಕೆ ಹೋಗಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ಚರ್ಚೆಯಾಗುತ್ತಿದೆ.

ವಾಣಿವಿಲಾಸ ಸಾಗರ ಜಲಾಶಯ ಮೂರನೇ ಬಾರಿಗೆ ಕೊಡಿ ಬಿದ್ದು ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಡ್ಯಾಂ ಭರ್ತಿಯಾಗಿರುವ ವಿಷಯ ಕೆಲವರಿಗೆ ಸಂತಸ ನೀಡಿದರೆ, ಜಲಾಶಯದ ಹಿನ್ನೀರಿನ ಭಾಗದ ರೈತರಿಗೆ ಸಂಕಟ ತಂದೊಡ್ಡಿದೆ. 2022 ರಲ್ಲಿ ಜಲಾಶಯ 2ನೇ ಬಾರಿಗೆ ಕೋಡಿ ಬಿದ್ದಾಗ ನೀರಿನ ಮಟ್ಟ 135 ಅಡಿಗೆ ತಲುಪಿತ್ತು. ಇದರಿಂದಾಗಿ, ಹಿನ್ನೀರಿನ ಬಹಳಷ್ಟು ಗ್ರಾಮಗಳ ಜನರು ಮನೆಗಳು ಮತ್ತು ತಮ್ಮ ಜಮೀನುಗಳನ್ನು ಕಳೆದುಕೊಂಡು ಗಂಜಿ ಕೇಂದ್ರಗಳನ್ನು ಸೇರಿದ್ದರು.

ಮತ್ತೊಮ್ಮೆ 3ನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿದ್ದು, ಹೊಸದುರ್ಗ ತಾಲೂಕಿನ ಕೆಲ ಗ್ರಾಮಗಳ ಜನರು 2022 ರಲ್ಲಿ ಅನುಭವಿಸಿದ ಪರಿಸ್ಥಿತಿಯನ್ನೇ ಅನುಭವಿಸುವಂತಾಗಿದೆ. ಜಲಾಶಯದ ಹಿನ್ನೀರಿನಿಂದ ಹೊಸದುರ್ಗದ ಜನರು ಎಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿದ್ದರು, ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಕಂಡರು ಕಾಣದಂತಿದ್ದಾರೆ. ಸಚಿವರ ನಡೆಯಿಂದ ಬಹಳಷ್ಟು ಬೇಸರವಾಗಿದೆ ಎಂದು ಶಾಸಕ ಗೋವಿಂದಪ್ಪ ಸಿಡಿಮಿಡಿಗೊಂಡಿದ್ದರು.

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಲು ಇದೇ ಜನವರಿ ತಿಂಗಳ 23ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮತಿ ಸೂಚಿಸಿದ್ದಾರೆ. ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಉಪ ಮುಖ್ಯಮಂತ್ರಿಯವರ ಹೆಚ್ಚುವರಿ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

ಬಾಗಿನ ಅರ್ಪಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹಿರಿಯೂರಿನ ಶಾಸಕ ಡಿ. ಸುಧಾಕರ್ ವಹಿಸಿಕೊಳ್ಳುವರೋ? ಹೊಸದುರ್ಗದ ಶಾಸಕ ಬಿ.ಜಿ. ಗೋವಿಂದಪ್ಪನವರು ವಹಿಸಿಕೊಳ್ಳುವರೋ? ಡಿ.ಸುಧಾಕರ್ ಅಧ್ಯಕ್ಷತೆಯಲ್ಲಿ (VV Sagar) ಕಾರ್ಯಕ್ರಮ ನಡೆದರೆ, ಜಿಲ್ಲಾ ಉಸ್ತುವಾರಿ ಸಚಿವರ ಮೇಲಿನ ವೈಮನಸ್ಸು ಮರೆತು ಶಾಸಕ ಗೋವಿಂದಪ್ಪ ಹಾಗೂ ಜಿಲ್ಲೆಯ ಇತರ ಶಾಸಕರು ಪಾಲ್ಗೊಳ್ಳುವರೇ? ಅಥವಾ ಗೈರಾಗುವರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಹಳ ಜೋರಾಗಿಯೇ ಚರ್ಚೆಯಾಗುತ್ತಿವೆ.

ಶಾಸಕ ಗೋವಿಂದಪ್ಪ ಹೇಳಿದ್ದಿಷ್ಟು

ವಿವಿ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸುವ ವಿಚಾರವಾಗಿ ನಾನು ಯಾವುದೇ ಮಾತನಾಡುವುದಿಲ್ಲ. ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಅವರ ಹೇಳಿಕೆಯೇ ಬೇರೆ, ನನ್ನ ಹೇಳಿಕೆಯೇ ಬೇರೆ. ಅವರ ಹೇಳಿಕೆಗೂ ನನ್ನ ಹೇಳಿಕೆಗೂ ಸಂಬಂಧವಿಲ್ಲ.

ಬಿ.ಜಿ.ಗೋವಿಂದಪ್ಪ, ಶಾಸಕ
———————-

ಮಾಜಿ ಸಚಿವ ಗೂಳಿಹಟ್ಟಿ ಹೇಳಿದ್ದೇನು?

ನಾನು ಶಾಸಕನಾಗಿದ್ದಾಗ ವಾಣಿವಿಲಾಸ ಸಾಗರ ಜಲಾಶಯದ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೆ. ಆಗ ಸರ್ಕಾರ ಸರ್ವೆ ನಡೆಸಿ, ನೀರು ಆವರಿಸಿಕೊಂಡಿರುವ 28.ಸಾವಿರ ಹೆಕ್ಟೇರ್ ಭೂಮಿ, ಅಣೆಕಟ್ಟು ಮತ್ತು ಕಣಿವೆ ಮಾರಮ್ಮ ದೇವಿ ದೇವಾಲಯವರೆಗೂ ಹೊಸದುರ್ಗ ತಾಲೂಕಿನ ವ್ಯಾಪ್ತಿಗೆ ಸೇರಿದೆ ಎಂದು ಅಧಿಕೃತವಾಗಿ ಅನುಮೋದನೆ ಹೊರಡಿಸಿತ್ತು. ಜಲಾಶಯ ಹೊಸದುರ್ಗಕ್ಕೆ ಸೇರಿದ್ದು ಎಂದು ಹೇಳಲು ಅಧಿಕಾರಿಗಳು ಕೂಡ ಹಿಂಜರಿಯುತ್ತಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬಂದಾಗ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಕಾರ್ಯಕ್ರಮಕ್ಕೆ ಹೋಗಿರಲಿಲ್ಲ. ಈಗಿನ ಶಾಸಕರಾಗಿರುವ ಗೋವಿಂದಪ್ಪನವರು ಸಿಎಂ ಮತ್ತು ಡಿಸಿಎಂ ಬಳಿ ಒಳ್ಳೆಯ ವಿಶ್ವಾಸವನ್ನಿಟ್ಟುಕೊಂಡಿದ್ದಾರೆ. ಅವರಿಗೆ ಮನವಿ ಮಾಡಿ, ಒತ್ತಡ ಹಾಕಿ ವಿವಿ ಸಾಗರ ಜಲಾಶಯದಿಂದ ಹೊಸದುರ್ಗದ ಜನರ ನೀರಿನ ಪಾಲನ್ನು ಪಡೆಯಲಿ.

ಗೂಳಿಹಟ್ಟಿ ಶೇಖರ್. ಮಾಜಿ ಸಚಿವ
———————-

ಇದನ್ನೂ ಓದಿ: ದಿನ ಭವಿಷ್ಯ | 18 ಜನವರಿ 2024 | Dina Bhavishya

ಸ್ಥಳೀಯ ನಾಯಕರ ಮಾತು (VV Sagar)

ವಿವಿ ಸಾಗರ ಜಲಾಶಯ ಸಂಪೂರ್ಣವಾಗಿ ಹೊಸದುರ್ಗ ತಾಲ್ಲೂಕಿನ ವ್ಯಾಪ್ತಿಯಲ್ಲಿಯೇ ಇದ್ದು, ಈ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳು ಹೊಸದುರ್ಗದ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿಯೇ ನಡೆಯಬೇಕು. ಹಿರಿಯೂರಿನ ಅಧ್ಯಕ್ಷರಿಗೆ ಇಲ್ಲಿ ನಡೆಯುವ ಕಾರ್ಯಕ್ರಮಗಳ ಅಧ್ಯಕ್ಷತೆ ನೀಡಿದರೆ, ಹೋರಾಟ ನಡೆಸಬೇಕಾಗುತ್ತದೆ. ಮೂರನೇ ಬಾರಿಗೆ ಜಲಾಶಯ ಕೋಡಿ ಬಿದ್ದಿದ್ದು, ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಬರುತ್ತಿರುವುದು ಸಂತಸದ ವಿಚಾರ. ಆದರೆ, ಬಾಗಿನ ಅರ್ಪಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಹೊಸದುರ್ಗದ ಶಾಸಕರಾಗಿರುವ ಗೋವಿಂದಪ್ಪನವರಿಗೆಯೇ ನೀಡಬೇಕು.

ಈಶ್ವರ್ ಕಾಡುಗೊಲ್ಲ.
ಚಿತ್ತಯ್ಯನಹಟ್ಟಿ ಗ್ರಾಮದ ರೈತ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

internal reservation: ಒಳಮೀಸಲಾತಿ ಜಾರಿ ಖಚಿತ : ಮಾಜಿ ಸಚಿವ ಎಚ್.ಆಂಜನೇಯ

creative activities: ಪಠ್ಯದ ಜತೆಗೆ ಸೃಜನಶೀಲ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಿ: ಬಿ.ವಿ.ತುಕಾರಾಂರಾವ್

Akka Cafe: ಜಿಲ್ಲಾ ಪಂಚಾಯತ್ ಆವರಣದಲ್ಲಿ ಅಕ್ಕ ಕೆಫೆ ಪ್ರಾರಂಭ

mining: ಗಣಿ ಮಾಫಿಯ ನಿಲ್ಲಿಸಿ ಪರಿಸರ ರಕ್ಷಿಸಿ | ಆ.16ರಂದು ಬಳ್ಳಾರಿಯಲ್ಲಿ ರಾಜ್ಯ ಸಮಾವೇಶ

ಆಗಸ್ಟ್ 1 ರಿಂದ ಹೊಸ UPI ನಿಯಮಗಳು ಜಾರಿ | ಏನೆಲ್ಲ ರೂಲ್ಸ್ ಇವೆ?

TAGGED:Chitradurga NewsHiriyurInflowKannada Newskannada suddiNammajana.comVV Sagar DamVV Sagar ReservoirWater LevelWater Storageಒಳಹರಿವುಕನ್ನಡ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿನಮ್ಮಜನ.ಕಾಂನೀರಿನ ಮಟ್ಟನೀರಿನ ಸಂಗ್ರಹಣೆವಿವಿ ಸಾಗರ ಅಣೆಕಟ್ಟುವಿವಿ ಸಾಗರ ಜಲಾಶಯಹಿರಿಯೂರು
Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy1
Sleepy0
Angry0
Dead0
Wink0
Previous Article ದಿನ ಭವಿಷ್ಯ | 18 ಜನವರಿ 2024 | Dina Bhavishya
Next Article Bangalore ನಲ್ಲಿ ಸಿರಿಧಾನ್ಯ ಹಬ್” ನಿರ್ಮಾಣಕ್ಕೆ ಶೀಘ್ರ ಭೂಮಿ ಪೂಜೆ: ಸಚಿವ ಎನ್.ಚಲುವರಾಯಸ್ವಾಮಿ
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

FIR ದಾಖಲು ಮಾಡಿದರು ತೆಂಗಿನ ಸಸಿ ನಾಟಿ
ಇಂದಿನ ಸುದ್ದಿ
ಹೊಳಲ್ಕೆರೆ: ಇಂದಿನಿಂದ 3 ದಿನ ವಿದ್ಯುತ್ ವ್ಯತ್ಯಯ : Power cut
ಇಂದಿನ ಸುದ್ದಿ
ಹಿಂಬಾಕಿ ನೀಡದಿದ್ದರೆ ಆ.5 ರಿಂದ KSRTC ಬಸ್ ಓಡಾಟ ಬಂದ್
ಇಂದಿನ ಸುದ್ದಿ
ಜಡೆಕುಂಟೆ ಮಂಜುನಾಥ್ ಅವರ ‘ಕಾಡು ಕಾಯುವ ಮರ’ ಕೃತಿ ಲೋಕಾರ್ಪಣೆ ನಾಳೆ
ವಿಶೇಷ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?