Namma JanaNamma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಕ್ರೀಡೆ
  • ಆರೋಗ್ಯ
  • ದಿನ ಭವಿಷ್ಯ
Reading: Ground Report: ಕಾಂಗ್ರೆಸ್ ಭದ್ರಕೋಟೆಯಲ್ಲಿ ಫಲ ಕೊಡುವುದೇ ಬಿಜೆಪಿ– ಜೆಡಿಎಸ್‌ ಮೈತ್ರಿ?
Share
Notification Show More
Font ResizerAa
Font ResizerAa
Namma JanaNamma Jana
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Search
  • ಇಂದಿನ ಸುದ್ದಿ
  • ರಾಜಕೀಯ
  • ವಿಶೇಷ ಸುದ್ದಿ
  • ಕ್ರೈಂ ಸುದ್ದಿ
  • ಅಡಿಕೆ ಧಾರಣೆ
  • ಆರೋಗ್ಯ
  • ಕ್ರೀಡೆ
  • ದಿನ ಭವಿಷ್ಯ
  • ರಾಜಕೀಯ
Have an existing account? Sign In
Follow US
  • Advertise
© 2024 Namma Janna. Kannada News Portal. All Rights Reserved.
Namma Jana > Blog > Blog > Ground Report: ಕಾಂಗ್ರೆಸ್ ಭದ್ರಕೋಟೆಯಲ್ಲಿ ಫಲ ಕೊಡುವುದೇ ಬಿಜೆಪಿ– ಜೆಡಿಎಸ್‌ ಮೈತ್ರಿ?
Blog

Ground Report: ಕಾಂಗ್ರೆಸ್ ಭದ್ರಕೋಟೆಯಲ್ಲಿ ಫಲ ಕೊಡುವುದೇ ಬಿಜೆಪಿ– ಜೆಡಿಎಸ್‌ ಮೈತ್ರಿ?

nammajana.com
Last updated: 17 April 2024 4:11 AM
By nammajana.com 5 Min Read
Share
MLA T Raghumurthy, JDS RAVISH, BJP ANIL KUMAR
SHARE
Telegram Group Join Now
WhatsApp Group Join Now

Will the BJP-JDS alliance Work in the Congress stronghold Challakere ? NammaJana Ground Report 

ನಮ್ಮಜನ.ಕಾಂ ಚಿತ್ರದುರ್ಗ: ಬರದ ನಾಡು ಎಂಬ ಹಣೆಪಟ್ಟಿ ಕಳಚಿ ಹಸಿರು ನಾಡು, ವಿಜ್ಞಾನ ನಗರಿ, ಅಭಿವೃದ್ಧಿ ಎಂದರೆ ಚಳ್ಳಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಜಿಲ್ಲೆಯ ಜನರ ಮನೆ ಮಾತಿನಲ್ಲೂ ಅಭಿವೃದ್ಧಿ ಅಂದರೆ ಚಳ್ಳಕೆರೆ ಅಂತೆ ಆಗಬೇಕು ಎಂಬ ಮಾತನ್ನು ಜಿಲ್ಲೆಯ ಜನರು ನೆನಪಿಸಿಕೊಂಡತಹ ಏಕೈಕ ಕ್ಷೇತ್ರ ಚಳ್ಳಕೆರೆ (ಎಸ್ಟಿ ಮೀಸಲು) ವಿಧಾನ ಸಭಾ ಕ್ಷೇತ್ರವಾಗಿದೆ.

ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷೇತರ ನಡುವೆ ಫೈಟ್

ಆಯಿಲ್ ಸಿಟಿ, ಮಿನಿ ಬಾಂಬೆ ಎಂಬ ಖ್ಯಾತಿಯು ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಇದೆ.ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿದ್ದರು ಸಹ ಚಳ್ಳಕೆರೆ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬರಗಾಲವಿಲ್ಲ. ಕಾಂಗ್ರೆಸ್‌, ಜೆಡಿಎಸ್ , ಬಿಜೆಪಿ ಪಕ್ಷಗಳ ಜೊತೆ ಪಕ್ಷೇತರ ಅಭ್ಯರ್ಥಿಗಳು ಸದ್ದು ಮಾಡಿ ಮಾಡಿ ಅಖಾಡಕ್ಕೆ ಜಿದ್ದಾ ಜಿದ್ದಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘುಮೂರ್ತಿ ಹ್ಯಾಟ್ರಿಕ್ ಬಾರಿಸಿ ಸೋಲಿಲ್ಲದ ಸರದಾರನಂತೆ ಚಳ್ಳಕೆರೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

govinda karajola BN chandrapp

ಚಳ್ಳಕೆರೆ ಕ್ಷೇತ್ರದಲ್ಲಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವು

ಚಳ್ಳಕೆರೆ ರಾಜಕಾರಣದಲ್ಲಿ ಒಮ್ಮೆ ಶಾಸಕರಾದರು ಮರಳಿ ಶಾಸಕರಾಗಿದ್ದು ತುಂಬಾ ವಿರಳ. ಪ್ರತಿ ಚುನಾವಣೆಯಲ್ಲಿ ಶಾಸಕರನ್ನು ಬದಲಾಯಿಸುತ್ತಾ ಬಂದ ಕ್ಷೇತ್ರವಾಗಿತ್ತು. ಒಮ್ಮೆ ಗೆದ್ದವರು ಮರಳಿ ಗೆದ್ದಿಲ್ಲ. ಆದರೆ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಕಂಡ ಶಾಸಕ ಟಿ.ರಘುಮೂರ್ತಿ ಅವರು ಮಾತ್ರ ಕಳೆದ 2018 ಮತ್ತು 2023 ಎರಡು ಚುನಾವಣೆಯಲ್ಲಿ ಶಾಂತಿಮೂರ್ತಿಯಾಗಿ ಈ ಬಾರಿ ನಾನೇ ಶಾಸಕ ಎಂಬ ಮಾತುಗಳನ್ನು ಹಾಡಿ ತೊಡೆ ತಟ್ಟಿ ಅಖಾಡ ಪ್ರವೇಶಿಸಿದ್ದ ಕಮಲ-ದಳ ಕಲಿಗಳನ್ನು ಸೋಲಿಸಿ ಮನೆಗೆ ಕಳಸಿದ ಸೈಲೆಂಟ್ ರಾಜಕಾರಣಿ ಎಂದರೆ ತಪ್ಪಗಲಾರದು. ಶಾಸಕ ಟಿ. ರಘುಮೂರ್ತಿ ಅವರಿಗೆ ಲೋಕಸಭೆ ಸವಾಲು ಎದುರಾಗಿದ್ದು ಅಖಾಡಲ್ಲಿ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸುವ ಸವಾಲು ಎದುರಾಗಿದೆ.

Read Also: Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?

ಲೋಕಸಭೆ ಟಿಕೆಟ್ ಘೋಷಿಸಿದ ದಿನದಿಂದಲೇ ರಣತಂತ್ರ ಹೆಣೆದು ಅಖಾಡ ಪ್ರವೇಶ

ಕಾಂಗ್ರೆಸ್‌ ಅಭ್ಯರ್ಥಿ ಬಿ.ಎಚ್‌.ಚಂದ್ರಪ್ಪ ಅವರು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದ ದಿನದಿಂದಲೇ ಅಖಾಡ ಪ್ರವೇಶ ಮಾಡಿದ ಶಾಸಕ ಟಿ.ರಘುಮೂರ್ತಿ ಹೋಬಳಿ ಮಟ್ಟ, ಗ್ರಾಪಂ ಮಟ್ಟದಲ್ಲಿನ ಸ್ಥಳೀಯ ಜನಪ್ರತಿನಿಧಿಗಳ, ಮುಖಂಡರ, ಕಾರ್ಯಕರ್ತರ ಸಭೆಗಳನ್ನು ನಡೆಸಿಕೊಂಡು ಕ್ಷೇತ್ರದಲ್ಲಿ ಒಂದು ರೌಂಡ್ ಬಿರುಸಿನ ಪ್ರಚಾರ ನಡೆಸಿ ಎರಡನೇ ಸುತ್ತಿ‌ನ ಕ್ಷೇತ್ರ ಸಂಚಾರ ಆರಂಭಿಸಿ ಪ್ರತಿ ಹಳ್ಳಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿದ್ದು ಗ್ಯಾರೆಂಟಿ ಮತ್ತು ಅಭಿವೃದ್ಧಿ ಕಾರ್ಯದ ಮೇಲೆ ಮತಬೇಟೆ ಮಾಡುತ್ತಿದ್ದು ಪಕ್ಷಕ್ಕೆ ಎಷ್ಟು ಲೀಡ್ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.

ಮೈತ್ರಿ ವೇದಿಕೆಯಲ್ಲಿ ಮೂವರು ಶಾಸಕ ಆಕಾಂಕ್ಷಿಗಳು

ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಎರಡು ಪಕ್ಷಗಳ ನಡುಗೆ ಒಮ್ಮತ ಮೂಡಿಸುವ ದೃಷ್ಟಿಯಿಂದ ಚಳ್ಳಕೆರೆ ನಗರದಲ್ಲಿ ಸಮನ್ವಯ ಸಭೆಗಳು ನಡೆಸುವ ಮೂಲಕ ಎಲ್ಲಾರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಸಭೆಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ಪಕ್ಷದಿಂದ ಅನಿಲ್‌ಕುಮಾರ್ ಜೆಡಿಎಸ್‌ ಅಭ್ಯರ್ಥಿ ಎಂ.ರವೀಶ್‌ ಕುಮಾರ್‌ ಇಬ್ಬರೂ ಭಾಗವಹಿಸಿದ್ದಾರೆ.ಇ

ದರ ಜೊತೆಗೆ ತಂದೆ ನಾಮಬಲದಲ್ಲಿ ರಾಜಕೀಯ ನೆಲೆ ಹುಡುಕಾಟದಲ್ಲಿದ್ದ ತನ್ನದೇ ಬೆಂಬಲಿಗರನ್ನು ಹೊಂದಿರುವ ಕೆ.ಟಿ. ಕುಮಾರಸ್ವಾಮಿ ಸಮನ್ವಯ ಸಭೆಯಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಬಿಜೆಪಿ ನಾಯಕರಿಗೆ ಒಂದಿಷ್ಟು ಮತಗಳು ಪ್ಲಸ್ ಆಗಬಹುದು ಎಂಬ ಲೆಕ್ಕಚಾರದಲ್ಲಿ ಬಿಜೆಪಿ ನಾಯಕರು ಉತ್ಸಾಹದಿಂದ ಸ್ವಾಗತ ಬಯಸಿದ್ದು ಯಾರು ಎಷ್ಟು ಮತಗಳನ್ನು ಮೈತ್ರಿ ಅಭ್ಯರ್ಥಿಗೆ ಕೊಡಿಸುತ್ತಾರೋ ಎಂಬುದನ್ನು ನೋಡಲು ಫಲಿತಾಂಶದ ತನಕ ಕಾಯಬೇಕಾಗಿದೆ

ಜೆಡಿಎಸ್-ಬಿಜೆಪಿ ವಿಕ್ ಮಾಡಲು ಸೆಕೆಂಡ್ ಲೈನ್ ಲೀಡರ್ ಅಪರೇಷನ್ ಗೆ ಮುಂದಾದ ರಘುಮೂರ್ತಿ

ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಅಭಿವೃದ್ಧಿ ಕಾರ್ಯ ಒಪ್ಪಿ‌ ಬಂದರೆ ಸ್ವಾಗತ ಎಂಬ ಓಪನ್ ಆಫರ್ ಮೂಲಕ ಶಾಸಕರ ಬಳಿ ಬರಲು ಮುಜುಗರ ಇದ್ದ ಜೆಡಿಎಸ್ – ಬಿಜೆಪಿ ಮುಖಂಡರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ನಿಮ್ಮ ಸಮಸ್ಯೆಗಳಿಗೆ ನಾನಿರ್ತೇನೆ ನೋ ಪ್ರಾಬಂ ಬನ್ನಿ ಎಂದ ಕೂಡಲೇ ಜೆಡಿಎಸ್ ಬಲಿಷ್ಠ ನೆಲೆಯಿರುವ ಪರಶುರಾಂಪುರ ಹೋಬಳಿಯಲ್ಲಿ ಪ್ರಭಾವಿ ಮಾಜಿ ಜಿಪಂ ಮಾಜಿ ಸದಸ್ಯ ಮುತ್ತುರಾಜ್‌, ಗ್ರಾ.ಪಂ. ಸದಸ್ಯರು, ಚಳ್ಳಕೆರೆ ನಗರದ ಜೆಡಿಎಸ್ ಮುಖಂಡರು ಮಾಜಿ ನಗರಸಭೆ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲವು ಜೆಡಿಎಸ್‌ ಮತ್ತು ಬಿಜೆಪಿ ಮುಖಂಡರನ್ನು ಸೆಳೆದು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಚಳ್ಳಕೆರೆ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.

ಕಾಂಗ್ರೆಸ್ ಗೆ ಸಂಪ್ರದಾಯಿಕ ಮತಗಳೇ ಶ್ರೀರಕ್ಷೆ

ಚಳ್ಳಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ 2013, 2018ರ ವಿಧಾನಸಭೆ ಫಲಿತಾಂಶದ ಪಕ್ಷಗಳ ಬಲಾಬಲ, ನಂತರ ಕ್ರಮವಾಗಿ 2014, 2019 ರಲ್ಲಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶದ ಮತಗಳಿಕೆ ಗಮನಿಸಿದಾಗ ಕಾಂಗ್ರೆಸ್‌ ತನ್ನ ಸಂಪ್ರದಾಯಿಕ ಓಟ್ ಬ್ಯಾಂಕ್‌ನಿಂದಲೇ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತ ಬಂದಿರುವುದು ಮತಗಳು ಪ್ರಮಾಣದಲ್ಲಿ ಸ್ಪಷ್ಟವಾಗುತ್ತದೆ.

2013 ರ ವಿಧಾನಸಭೆ ಚುನಾವಣೆ ಮತಗಳಿಕೆ

  • ಕಾಂಗ್ರೆಸ್: ಟಿ.ರಘುಮೂರ್ತಿ 60,197 ಮತ
  • ಜೆಡಿಎಸ್‌ : ಪಿ.ತಿಪ್ಪೇಸ್ವಾಮಿ 27,373 ಮತ
  • ಕೆಜೆಪಿ: ಕೆ.ಟಿ.ಕುಮಾರಸ್ವಾಮಿ: 37,074 ಮತ
  • ಬಿಜೆಪಿ: ಜಯಪಾಲಯ್ಯ 12,981 ಮತ

ಲೋಕಸಭೆಗೆ 2014 ರಲ್ಲಿ ನಡೆದ ಚುನಾವಣೆ ಮತಗಳಿಕೆ

  • ಕಾಂಗ್ರೆಸ್‌ : ಬಿ.ಎನ್‌.ಚಂದ್ರಪ್ಪ, 59,961 ಮತ
  • ಜೆಡಿಎಸ್‌: ಗೂಳಿಹಟ್ಟಿ ಶೇಖರ್‌ 23,208 ಮತ
  • ಬಿಜೆಪಿ: ಜನಾರ್ಧನಸ್ವಾಮಿ 40,929 ಮತ

ಇಲ್ಲಿ2013 ರಲ್ಲಿ ವಿಧಾನಸಭೆಯಲ್ಲಿ ವಿಭಜನೆಯಾಗಿರುವ ಕೆಜೆಪಿ, ಬಿಜೆಪಿ ಮತಗಳು ಒಗ್ಗೂಡಿರುವ ಕ್ಲಿಯರ್ ಪಿಚ್ಚರ್ ದೊರೆಯುತ್ತದೆ.

2018 ರ ವಿಧಾನಸಭೆ ಚುನಾವಣೆ ಫಲಿತಾಂಶ

  • ಕಾಂಗ್ರೆಸ್‌ನ ಟಿ.ರಘುಮೂರ್ತಿ 72,874 ಮತ,
  • ಜೆಡಿಎಸ್‌ನ ಎಂ.ರವೀಶ್‌ ಕುಮಾರ್‌ 59,335 ಮತ
  • ಬಿಜೆಪಿಯ ಕೆ.ಟಿ.ಕುಮಾರಸ್ವಾಮಿ 33,471 ಮತ

ಕಳೆದ ಬಾರಿಯ ಮೈತ್ರಿ ಫಲ ನೀಡಲಿಲ್ಲ

2019 ರ ಲೋಕಸಭಾ ಚುನಾವಣೆ ಮತಗಳಿಕೆ

ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಬಿ.ಎನ್‌.ಚಂದ್ರಪ್ಪ 72,987 ಮತ ಪಡೆದರು. ಆದರೆ
ಜೆಡಿಎಸ್‌ ಮೈತ್ರಿ ಫಲವಾಗಿಯು ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ ದಕ್ಕಿರುವುದು ಕೇವಲ 113 ಮತಗಳು ಮಾತ್ರ.
ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 33,471 ಮತಗಳನ್ನ ಪಡೆದಿದ್ದರೆ, ಲೋಕಾ ಚುನಾವಣೆಯಲ್ಲಿ ಬಿಜೆಪಿಯ ಎ.ನಾರಾಯಣಸ್ವಾಮಿ 70,223 ಮತಗಳನ್ನು ಪಡೆದಿದ್ದಾರೆ. ಹೆಚ್ಚುವರಿಯಾಗಿ 36,471 ಮತಗಳನ್ನು ಪಡೆದಿದ್ದಾರೆ.

ವಿಧಾನಸಭೆ ಕ್ಷೇತ್ರದ ಮತದಾರರ ಸಂಖ್ಯೆ

  • 1,11,280 ಪುರುಷರು
  • 1,13,160 ಮಹಿಳೆಯರು
  • 07 ಲಿಂಗತ್ವ ಅಲ್ಪಸಂಖ್ಯಾತರು
  • 2,24,447 ಒಟ್ಟು ಮತದಾರರು

2023 ರ ಚಳ್ಳಕೆರೆ ವಿಧಾನಸಭೆ ಚುನಾವಣೆ ಫಲಿತಾಂಶ

  • ಟಿ.ರಘುಮೂರ್ತಿ ಕಾಂಗ್ರೆಸ್‌ 67,952
  • ಆರ್‌.ಅನಿಲ್‌ಕುಮಾರ್‌ ಬಿಜೆಪಿ 22,894
  • ಎಂ.ರವೀಶ್‌ಕುಮಾರ್‌ ಜೆಡಿಎಸ್‌ 51,502
  • ಕೆ.ಟಿ.ಕುಮಾರಸ್ವಾಮಿ ಪಕ್ಷೇತರ 29,148

ಗೆಲುವಿನ ಅಂತರ: 16,450

ಚಳ್ಳಕೆರೆ ವಿಧಾನಸಭೆ ಕ್ಷೇತ್ರದ 2019 ಲೋಕಸಭೆಯಲ್ಲಿ ಅಭ್ಯರ್ಥಿ ಪಡೆದ ಮತಗಳು

  • ಬಿ.ಎನ್‌.ಚಂದ್ರಪ್ಪ ಕಾಂಗ್ರೆಸ್‌ 72,987 ಮತ
  • ಎ.ನಾರಾಯಣಸ್ವಾಮಿ ಬಿಜೆಪಿ 70.223 ಮತ

English Summary: Will the BJP-JDS alliance Work in the Congress stronghold Challakere ? NammaJana.com Ground Report 

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ನಮ್ಮಜನ.ಕಾಂ gmail:  nammajananews@gmail.com

» Whatsapp Number-9686622252

You Might Also Like

JOB NEWS | ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 6,770 ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್

Gold Rate | ಬಂಗಾರದ ಬೆಲೆಯಲ್ಲಿ 500 ರೂ ಇಳಿಕೆ

Uchchhangi Yallamma | ರಾಜಬೀದಿಯಲ್ಲಿ ಮದಕರಿ ನಾಯಕನ ಮನೆ ದೇವರು ಉಚ್ಚಂಗಿ ಯಲ್ಲಮ್ಮ ದೇವರ ಭವ್ಯ ಮೆರವಣಿಗೆ

Nagarasabhe | ಆಸ್ತಿ ತೆರಿಗೆ ಶೇ.5ರ ರಿಯಾಯಿತಿ | ಜೂನ್ 30 ರವರೆಗೆ ಅವಧಿ ವಿಸ್ತರಣೆ

Dina Bhavishya | ದಿನ ಭವಿಷ್ಯ, ಇವತ್ತು ಯಾವ್ಯಾವ ರಾಶಿಗೆ ಶುಭ

Share This Article
Facebook Twitter Whatsapp Whatsapp Telegram Email Print
ಈ ಮೇಲಿನ ಸುದ್ದಿ, ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಏನು?
Love0
Sad0
Happy0
Sleepy0
Angry0
Dead0
Wink1
Previous Article Chitradurga Crime News Today ಆಶ್ರಮದಲ್ಲಿ ತಾಯಿ-ಮಗಳ ಆತ್ಮಹತ್ಯೆ| ನೀರಿ‌ನ ತೊಟ್ಟಿಯಲ್ಲಿ ಮೃತದೇಹ ಪತ್ತೆ
Next Article ಚಿತ್ರದುರ್ಗದ ಹಿಂದುಳಿದ ವರ್ಗಗಳ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Leave a comment

Leave a Reply Cancel reply

Your email address will not be published. Required fields are marked *

Stay Connected

TelegramFollow

Latest News

Bhadra: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ
ಇಂದಿನ ಸುದ್ದಿ
Nikhil Kumaswamy: ಮಾಜಿ ಸಂಸದ ಪ್ರಜ್ವಲ್ ಜೀವಾವಧಿ ಶಿಕ್ಷೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ರಾಜಕೀಯ
ಗಣಿಬಾಧಿತ ಹಳ್ಳಿಗಳಲ್ಲಿ ವಸತಿ, ನಿವೇಶನ ರಹಿತ ಫಲಾನುಭವಿಗಳ ಆಯ್ಕೆ : ಗ್ರಾಮ ಸಭೆ ನಡೆಸಲು ದಿನಾಂಕ ನಿಗದಿ | HOLALKERE
ಇಂದಿನ ಸುದ್ದಿ
HIRIYUR | ಕುಡಿಯುವ ನೀರಿಗಾಗಿ ಶಾಲಾ ಮಕ್ಕಳು ಪ್ರತಿಭಟನೆ
ಇಂದಿನ ಸುದ್ದಿ

Kannada News (ಕನ್ನಡ ಸುದ್ದಿ): Get the latest updates of karnataka news, world news, india news, political News and celebrity Kannada news and more on Nammajana (nammajana.com).

Sign Up for Our Newsletter

Subscribe to our newsletter to get our newest articles instantly!

Namma JanaNamma Jana
© 2025 NammaJanna. Kannada News Portal. All Rights Reserved.
adbanner
AdBlock Detected
Our site is an advertising supported site. Please whitelist to support our site.
Okay, I'll Whitelist
Welcome Back!

Sign in to your account

Lost your password?